ನವದೆಹಲಿ: ಗಣರಾಜ್ಯೋತ್ಸವ ದಿನದಂದು ರಾಜಧಾನಿ ನವದೆಹಲಿಯನ್ನು ತೊಂದರೆಗೊಳಿಸುವ ಉದ್ದೇಶದಿಂದ ಎರಡು ಶಂಕಿತ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಇಬ್ಬರು ಭಯೋತ್ಪಾದಕರಿಗಾಗಿ ದೆಹಲಿ ಪೊಲೀಸ್ ವಿಶೇಷ ಇಲಾಖೆ, ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮತ್ತು ಯುಪಿ ಎಟಿಎಸ್ ಹಂಚಿಕೆ ಹುಡುಕಾಟ ಕಾರ್ಯಾಚರಣೆಯನ್ನು ನಡೆಸುತ್ತಿದೆ. ದೆಹಲಿಯ ಅಕ್ಷರಧಾಮ ದೇವಸ್ಥಾನದ ಮೇಲೆ ದಾಳಿ ಮಾಡಲು ಈ ಇಬ್ಬರು ಶಂಕಿತ ಭಯೋತ್ಪಾದಕರು ಬಂಧಿರುವ್ವ ಶಂಕೆ ವ್ಯಕ್ತವಾಗಿದ್ದು, ಅಕ್ಷರಧಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದಲ್ಲದೆ, ಜನವರಿ 26ಕ್ಕಿಂತ ಮುಂಚೆಯೇ ದೆಹಲಿಯ ಇತರ ಭಾಗಗಳನ್ನು ಸ್ಫೋಟಿಸುವ ಯೋಜನೆಯನ್ನು ಅವರು ಮಾಡಿರಬಹುದು ಎಂದೂ ಸಹ ಶಂಕಿಸಲಾಗಿದೆ.


COMMERCIAL BREAK
SCROLL TO CONTINUE READING

ಆಗ್ರಾದಲ್ಲಿ ಬಂಧನಕ್ಕೊಳಗಾದ ವ್ಯಕ್ತಿಯಿಂದ ದೊರೆಯಿತು ಸುಳಿವು... 
ಪೊಲೀಸ್ ಮೂಲಗಳ ಪ್ರಕಾರ, ಇತ್ತೀಚೆಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ಛಜಾರಾಸಿ ಎಂಬ ಶಂಕಿತನನ್ನು ಬಂಧಿಸಲಾಗಿದೆ. ಈ ಘಟನೆಯನ್ನು ಕೈಗೊಳ್ಳಲು ಇಬ್ಬರು ಶಂಕಿತ ಭಯೋತ್ಪಾದಕರು ದೆಹಲಿಯಲ್ಲಿ ಜನವರಿ 26 ರಂದು ಸಕ್ರಿಯರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅಕ್ಷರಧಾಮ ದೇವಸ್ಥಾನವನ್ನು ಗುರಿಯಾಗಿಸಲು ಇಬ್ಬರು ಭಯೋತ್ಪಾದಕರು ಯೋಜನೆ ರೂಪಿಸಿರುವುದಾಗಿ ಬಂಧಿತ ವ್ಯಕ್ತಿ ತಿಳಿಸಿದ್ದಾನೆ. ಇಬ್ಬರು ಶಂಕಿತ ಭಯೋತ್ಪಾದಕರು ದೆಹಲಿಯ ಜಮಾ ಮಸೀದಿ ಪ್ರದೇಶದಲ್ಲಿರುವ ಅಲ್ ರಶೀದ್ ಹೋಟೆಲ್ ಮತ್ತು ಝಜ್ಜಮ್ ಅತಿಥಿ ಗೃಹದಲ್ಲಿದ್ದಾರೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.


ಉತ್ತರ ಪ್ರದೇಶದ ಪೊಲೀಸರು ಈ ಮಾಹಿತಿಯನ್ನು ದೆಹಲಿ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ನಂತರ ದೆಹಲಿ ಪೋಲಿಸ್ ಸ್ಪೆಶಲ್ ಸೆಲ್, ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮತ್ತು ಯುಪಿ ಎಟಿಎಸ್ ಜಂಟಿ ಹುಡುಕಾಟ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸಂಶಯಾಸ್ಪದ ಭಯೋತ್ಪಾದಕರಿಗೆ ಗುಪ್ತಚರ ಸಹಾಯವೂ ಸಹ ಕೋರಿದೆ.


ಗಣರಾಜ್ಯೋತ್ಸವ ದಿನ ಮತ್ತು ಸ್ವಾತಂತ್ರ್ಯ ದಿನದಂದು ರಾಷ್ಟ್ರ ರಾಜಧಾನಿ ದೆಹಲಿಯನ್ನು ಅಸ್ತವ್ಯಸ್ತಗೊಳಿಸುವ ಉದ್ದೇಶದಿಂದ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂಬುದು ತಿಳಿದುಬಂದಿದೆ. ದೆಹಲಿ ಪೊಲೀಸರಿಗೆ ಹೆಚ್ಚುವರಿಯಾಗಿ ಯಾವುದೇ ದಾಳಿಯನ್ನು ತಡೆಯಲು ಕೇಂದ್ರೀಯ ತನಿಖಾ ಸಂಸ್ಥೆಗಳೊಂದಿಗೆ ಈ ಬಾರಿ ಕೂಡ, ರಿಪಬ್ಲಿಕ್ ದಿನದ ಮುಂಚೆಯೇ ದೆಹಲಿಯ ಭದ್ರತಾ ಚಟುವಟಿಕೆಗಳನ್ನು ಹೆಚ್ಚಿಸಿದೆ. ದೆಹಲಿಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏರ್ ಫೋರ್ಸ್ನ ಸಹಾಯವನ್ನೂ ತೆಗೆದುಕೊಳ್ಳಲಾಗಿದೆ. ಪ್ರಮುಖ ಮಾರುಕಟ್ಟೆಗಳು, ಮೆಟ್ರೋ ಕೇಂದ್ರಗಳು, ಮಾಲ್ಗಳು ಮತ್ತು ನಗರದ ಇತರ ಸ್ಥಳಗಳಲ್ಲಿ ಸುರಕ್ಷತಾ ತಪಾಸಣೆ ಹೆಚ್ಚಾಗುತ್ತದೆ.