ಮುಂಬೈ: ಮಹಾರಾಷ್ಟ್ರದಲ್ಲಿ ಇಂದು ಸಂಪುಟ ವಿಸ್ತರಿಸಬೇಕಿದೆ. ಮಹಾ ವಿಕಾಸ್ ಅಘಾಡಿ ಸರ್ಕಾರದ ಮೊದಲ ಕ್ಯಾಬಿನೆಟ್ ವಿಸ್ತರಣೆಯಲ್ಲಿ, ಎಲ್ಲಾ ಮೂರು ಪಕ್ಷಗಳಿಂದ ಒಟ್ಟು 36 ಮಂತ್ರಿಗಳು ಸ್ಥಾನ ಪಡೆಯುವ ನಿರೀಕ್ಷೆಯಿದೆ. ಈ ಪೈಕಿ 10 ಶಾಸಕರು ಕಾಂಗ್ರೆಸ್ ಕೋಟಾದಿಂದ,  13 ಶಾಸಕರು ಎನ್‌ಸಿಪಿ ಕೋಟಾದಿಂದ ಮತ್ತು ಶಿವಸೇನೆ ಕೋಟಾದಿಂದ 13 ಮಂದಿಗೆ ಮಂತ್ರಿ ಪದವಿ ದೊರೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಈ ನಾಯಕರು ಶಿವಸೇನೆಯಿಂದ ಮಂತ್ರಿ ಸ್ಥಾನ:


1) ಗುಲಾಬ್ರಾವ್ ಪಾಟೀಲ್
2) ಸಂಜಯ್ ರಾಥೋಡ್
3) ದಾದಾ ಸ್ಟ್ರಾ
4) ಅನಿಲ್ ಪರಬ್
5) ಶಂಭುರಾಜೆ ದೇಸಾಯಿ
6) ಉದಯ್ ಸಮಂತಾ
7) ಬಚು ಕಡು
8) ಅಬ್ದುಲ್ ಸತ್ತಾರ್
9) ಸಂದೀಪನ್ ಭೂಮಾರೆ
10) ರಾಜೇಂದ್ರ ಪಾಟೀಲ್-ಯೆಡ್ರಾವ್ಕರ್
11) ಶಂಕರರಾವ್ ಗಡಖ್


ಈ ಹಿರಿಯ ನಾಯಕರಿಗೆ ಶಿವಸೇನೆ ಈ ಬಾರಿ ಅವಕಾಶ ನೀಡಲಿಲ್ಲ:


  • ದಿವಾಕರ್ ರಾವಟೆ

  • ರಾಮದಾಸ್ ಕದಮ್

  • ತನಜಿ ಸಾವಂತ್

  • ರವೀಂದ್ರ ವೈಕರ್

  • ದೀಪಕ್ ಕೇಸರ್


ಇಂದು ನಡೆಯಲಿರುವ ಕ್ಯಾಬಿನೆಟ್ ವಿಸ್ತರಣೆಯಲ್ಲಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರತ್ತ ಎಲ್ಲರ ಚಿತ್ತ ನೆಟ್ಟಿದೆ. ಮೂಲಗಳ ಪ್ರಕಾರ, ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೂ ಈ ಬಗ್ಗೆ ಸಸ್ಪೆನ್ಸ್ ಉಳಿದಿದೆ. ಅದೇ ಸಮಯದಲ್ಲಿ, ಎನ್‌ಸಿಪಿ ಮುಖಂಡ ಮತ್ತು ಸಚಿವ ನವಾಬ್ ಮಲಿಕ್, 'ನಾವು ಶಿವಸೇನೆಗೆ ಹೆಸರುಗಳನ್ನು ನೀಡಿದ್ದೇವೆ, ಹಾಗೆಯೇ ಕ್ಯಾಬಿನೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ನೀಡಿದ್ದೇವೆ ಎಂದರು.


ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದ್ದಾಗ ಆ ಬಗ್ಗೆ ಪ್ರತಿಕ್ರಿಯಿಸುವುದು ಉಚಿತವಲ್ಲ ಎಂದಷ್ಟೇ ಹೇಳಿದರು.


ಇಂದು ಸಚಿವರಾಗುವ 10 ಕಾಂಗ್ರೆಸ್ ಶಾಸಕರಲ್ಲಿ 8 ಮಂದಿ ಕ್ಯಾಬಿನೆಟ್ ಹುದ್ದೆಗೆ ಮತ್ತು 2 ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಶೋಕ್ ಚವಾಣ್ (ಕ್ಯಾಬಿನೆಟ್), ಅಮಿತ್ ದೇಶಮುಖ್ (ಕ್ಯಾಬಿನೆಟ್), ಅಸ್ಲಂ ಶೇಖ್ (ಕ್ಯಾಬಿನೆಟ್), ಯಶೋಮತಿ ಠಾಕೂರ್ (ಕ್ಯಾಬಿನೆಟ್), ವರ್ಷಾ ಗಾಯಕವಾಡ್ (ಕ್ಯಾಬಿನೆಟ್), ಸುನೀಲ್ ಕೇದಾರ್ (ಕ್ಯಾಬಿನೆಟ್), ಕೆ.ಸಿ.ಪಡ್ವಿ (ಕ್ಯಾಬಿನೆಟ್), ವಿಜಯ್ ವಾಡೆಟಿವರ್ (ಕ್ಯಾಬಿನೆಟ್) ಕದಮ್ (ರಾಜ್ಯ ಸಚಿವ), ಸತೇಜ್ ಪಾಟೀಲ್ (ರಾಜ್ಯ ಸಚಿವ) ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.


ಅದೇ ಸಮಯದಲ್ಲಿ ಎನ್‌ಸಿಪಿ ಕೋಟಾದಿಂದ ಅಜಿತ್ ಪವಾರ್, ದಿಲೀಪ್ ವಾಲ್ಸೆ-ಪಾಟೀಲ್, ಹಸನ್ ಮುಶ್ರಿಫ್, ರಾಜೇಶ್ ಟೊಪೆ, ಅನಿಲ್ ದೇಶ್ಮುಖ್, ರಾಜೇಂದ್ರ ಶಿಂಗ್ನೆ, ನವಾಬ್ ಮಲಿಕ್, ಜಿತೇಂದ್ರ ಅವಾದ್, ಧನಂಜಯ್ ಮುಂಡೆ, ಬಾಲಾಸಾಹೇಬ್ ಪಾಟೀಲ್, ದತ್ತಾ ಭಾರನ್ ಸಚಿವರಾಗಲಿದ್ದಾರೆ ಎಂದು ಹೇಳಲಾಗಿತ್ತಿದೆ.


ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಕೂಟಕ್ಕೆ ಬಹುಮತ ಸಿಕ್ಕಿತು. ಆದರೆ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಶಿವಸೇನೆ ಮತ್ತು ಬಿಜೆಪಿ ನಡುವಿನ ಸಂಘರ್ಷ ಉಂಟಾಯಿತು. ಆ ನಂತರ ಶಿವಸೇನೆ ಕಾಂಗ್ರೆಸ್-ಎನ್‌ಸಿಪಿ ಜೊತೆ ಸರ್ಕಾರ ರಚಿಸಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು.