ಗೋರಖ್ಪುರ: ಅಕ್ರಮ ಮದ್ಯ ವ್ಯಾಪಾರದಲ್ಲಿ ತೊಡಗಿರುವವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.


COMMERCIAL BREAK
SCROLL TO CONTINUE READING

ಯುಪಿಯ ಅಜಗಢ್, ಹಾರ್ದೊಯಿ, ಬರಾಬಂಕಿ ಮತ್ತು ಕಾನ್ಪುರ್ ಜಿಲ್ಲೆಗಳಲ್ಲಿ ಸಂಭವಿಸಿರುವ ಕಳ್ಳಬಟ್ಟಿ ದುರಂತದಲ್ಲಿ ಎಸ್ಪಿ ಮಾಜಿ ಮುಖಂಡರ ಕೈವಾಡವಿದೆ ಎಂದು ಯೋಗಿ ಶನಿವಾರ ರಾತ್ರಿ ಹೇಳಿದ್ದರು. ಜೊತೆಗೆ ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಪ್ರಕರಣಕ್ಕೆ ಸಂಬಧಿಸಿದಂತೆ ಉತ್ತರಾಖಂಡ ಮುಖ್ಯಮಂತ್ರಿಯೊಂದಿಗೂ ಮಾತನಾಡಿದ್ದು, ಅಕ್ರಮ ಮದ್ಯ ವ್ಯಾಪಾರ ಸಂಬಂಧಿತ ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿರುವುದಾಗಿ ಯೋಗಿ ತಿಳಿಸಿದರು


ಕುಶಿನಗರ ಜಿಲ್ಲೆಯ ಎಕ್ಸೈಸ್ ಆಫೀಸರ್, ಎಕ್ಸೈಸ್ ಇನ್ಸ್ಪೆಕ್ಟರ್, ಪೊಲೀಸ್ ಇನ್ಚಾರ್ಜ್ ಮತ್ತು ಬೀಟ್ ಕಾನ್ಸ್ಟೇಬಲ್ಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.