ನವದೆಹಲಿ: ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಘಟನೆಯೊಂದರಲ್ಲಿ ಮತ್ತೊಬ್ಬ ವ್ಯಕ್ತಿಯಿಂದ ಮೂತ್ರ ವಿಸರ್ಜನೆಗೆ ಒಳಗಾದ ಮಧ್ಯಪ್ರದೇಶದ ಬುಡಕಟ್ಟು ವ್ಯಕ್ತಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪಾದಗಳನ್ನು ತೊಳೆದು, ಕ್ಷಮೆಯಾಚಿಸಿ ಅವರನ್ನು ಸ್ನೇಹಿತ ಎಂದು ಬಣ್ಣಿಸಿದ್ದಾರೆ.


COMMERCIAL BREAK
SCROLL TO CONTINUE READING

ಕರೌಂಡಿಯ 36 ವರ್ಷದ ಬುಡಕಟ್ಟು ಜನಾಂಗದ ದಸ್ಮತ್ ರಾವತ್ ಅವರೊಂದಿಗೆ ಗೌರವ ಸೂಚಕವಾಗಿ ಪಾದಗಳನ್ನು ತೊಳೆಯುವ ಮೊದಲು ಮುಖ್ಯಮಂತ್ರಿ ಸಂವಾದ ನಡೆಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಇದೇ ವೇಳೆ ಚೌಹಾಣ್ ಅವರು ದಶಮತ್ ರಾವತ್ ಅವರಿಗೆ ಅವರ ಕುಟುಂಬವು ಸರ್ಕಾರಿ ಯೋಜನೆಗಳ ಫಲಾನುಭವಿಗಳೇ ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.


ಇದನ್ನೂ ಓದಿ- Gold Price Today: ಆಷಾಢ ಬಂದ್ರೂ ಇಳಿಕೆ ಆಗಲೇ ಇಲ್ಲ ಹಳದಿ ಲೋಹ..!!


ಶ್ರೀಕೃಷ್ಣನು ಉಡುಗೊರೆಗಳ ಸುರಿಮಳೆಗೈದ ಬಡ ಬಾಲ್ಯದ ಗೆಳೆಯ ಸುದಾಮನಿಗೆ ಹೋಲಿಸಿದ ಮುಖ್ಯಮಂತ್ರಿ ಚೌಹಾನ್  "ದಸ್ಮಾತ್, ಈಗ ನೀನು ನನ್ನ ಸ್ನೇಹಿತ. ಇದು ನಿಮ್ಮ ನೋವನ್ನು ಹಂಚಿಕೊಳ್ಳುವ ಪ್ರಯತ್ನವಾಗಿದೆ, ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.


ಫ್ರೀ ರೇಶನ್ ಜೊತೆಗೆ ಈ ಸೌಲಭ್ಯ ಕೂಡಾ ಇನ್ನು ಸಂಪೂರ್ಣ ಉಚಿತ ! ಪಡಿತರ ಚೀಟಿದಾರರಿಗೆ ಜಾಕ್ ಪಾಟ್


ಇನ್ನೊಂದೆಡೆಗೆ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ "ರಾಜ್ಯದ ಸಿಧಿ ಜಿಲ್ಲೆಯ ಬುಡಕಟ್ಟು ಯುವಕನ ಮೇಲೆ (ವ್ಯಕ್ತಿ) ಮೂತ್ರ ವಿಸರ್ಜನೆ ಮಾಡಿದ ದೌರ್ಜನ್ಯದ ವಿಡಿಯೋ ಹೊರಬಿದ್ದಿದೆ. ಬುಡಕಟ್ಟು ಸಮುದಾಯದ ಯುವಕರೊಂದಿಗೆ ಇಂತಹ ಹೇಯ ಕೃತ್ಯಕ್ಕೆ ನಾಗರಿಕ ಸಮಾಜದಲ್ಲಿ ಸ್ಥಳವಿಲ್ಲ" ಎಂದು  ಕಿಡಿ ಕಾರಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.