ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ಭೇಟಿಯಾದ ಸಿಎಂ ಮಮತಾ ಬ್ಯಾನರ್ಜೀ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರ ಅಧಿಕೃತ ನಿವಾಸವಾದ ರಾಜ್ ಭವನದಲ್ಲಿ ಇಂದು ಗವರ್ನರ್ ಜಗದೀಪ್ ಧಂಕರ್ ಅವರನ್ನು ಒಂದು ಗಂಟೆ ಭೇಟಿಯಾದರು.
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರ ಅಧಿಕೃತ ನಿವಾಸವಾದ ರಾಜ್ ಭವನದಲ್ಲಿ ಇಂದು ಗವರ್ನರ್ ಜಗದೀಪ್ ಧಂಕರ್ ಅವರನ್ನು ಒಂದು ಗಂಟೆ ಭೇಟಿಯಾದರು.
ಸಭೆಯ ನಂತರ, ರಾಜ್ಯಪಾಲರು "ನಾನು ಮತ್ತು ಶ್ರೀಮತಿ ಸುದೇಶ್ ಧಂಕರ್ ಅವರು ಇಂದು ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ರಾಜ್ ಭವನಕ್ಕೆ ಭೇಟಿ ನೀಡಿದಾಗ ಸ್ವಾಗತಿಸಿದೆವು" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಸರ್ಕಾರ ಕಾನೂನಿನಿಂದ ಅಂತರ ಕಾಯ್ದುಕೊಳ್ಳುತ್ತಿದೆ- ರಾಜ್ಯಪಾಲ್ ಜಗದೀಪ್ ಧಂಕರ್
ರಾಜ್ಯಪಾಲರು ಹಾಗೂ ಮಮತಾ ಬ್ಯಾನರ್ಜೀ (Mamata Banerjee) ನಡುವೆ ಆಗಾಗ ಮಾತಿನ ವಾಗ್ದಾಳಿ ನಡೆಯುತ್ತಲೇ ಇರುತ್ತವೆ. ರಾಜ್ಯಪಾಲರು ತಮ್ಮ ಸಾಂವಿಧಾನಿಕ ಮಿತಿಗಳನ್ನು ಮೀರಿ ವರ್ತಿಸುತ್ತಾರೆ ಎಂದು ಟಿಎಂಸಿ ಪಕ್ಷವು ಆರೋಪಿಸುತ್ತಲೇ ಇದೆ.
'ಟ್ಯಾಗೋರ್ ಅವರ ನಾಡಿನಲ್ಲಿ ಎಂದಿಗೂ ದ್ವೇಷದ ರಾಜಕಾರಣ ಗೆಲ್ಲಲು ಸಾಧ್ಯವಿಲ್ಲ'
'ನಾವು ಅವರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದೇವೆ ಮತ್ತು ರಾಷ್ಟ್ರಪತಿಯನ್ನು ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದೇವೆ. ನಾವು ಈಗಾಗಲೇ ಪತ್ರವೊಂದನ್ನು ಕಳುಹಿಸಿದ್ದೇವೆ.ಈ ರಾಜ್ಯಪಾಲರು ದೇಶದ ಉಳಿದ ಭಾಗಗಳಲ್ಲಿ ಬಿಜೆಪಿ ನಾಶಮಾಡುತ್ತಿದೆ ಹಾಗೆ ಬಂಗಾಳವನ್ನು ನಾಶಮಾಡಲು ಬಯಸುತ್ತಾರೆ, ಆದರೆ ಬಂಗಾಳದ ಪರಂಪರೆ ಅದನ್ನು ಮಾಡಲು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ತೃಣಮೂಲ ಸಂಸದ ಹೇಳಿದರು.
ಇನ್ನೊಂದೆಡೆಗೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಸಭೆ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸೌಜನ್ಯದ ಕರೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.