Supreme Court Questions Lakshadweep Administration: ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಚಿಕನ್ ಮತ್ತು ಮಟನ್ ಅನ್ನು ತೆಗೆದುಹಾಕಲಾಗಿದೆ ಎಂದು ಸುಪ್ರೀಂ ಪ್ರಶ್ನಿಸಿದೆ. ಮಧ್ಯಾಹ್ನದ ಊಟದ ಯೋಜನೆಯಿಂದ ಚಿಕನ್ ಮತ್ತು ಮಟನ್ ಅನ್ನು ಏಕೆ ತೆಗೆದುಹಾಕಲಾಗಿದೆ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಲಕ್ಷದ್ವೀಪ ಆಡಳಿತದಿಂದ ಉತ್ತರ ಕೋರಿದೆ. ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ಲಕ್ಷದ್ವೀಪದಲ್ಲಿ ಮಧ್ಯಾಹ್ನದ ಊಟದ ಯೋಜನೆಯಿಂದ ಕೋಳಿ ಮತ್ತು ಮಟನ್ ಅನ್ನು ತೆಗೆದುಹಾಕುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ಲಕ್ಷದ್ವೀಪದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಚಿಕನ್ ಮತ್ತು ಮಟನ್ ನೀಡಲಾಗುತ್ತಿತ್ತು, ಆದರೆ ಇದೀಗ ಅಲ್ಲಿನ ಆಡಳಿತವು ಇದನ್ನು ನಿಲ್ಲಿಸಿದೆ. ಪೀಠವು ಮುಂದಿನ ವಿಚಾರಣೆಯನ್ನು ಜುಲೈ 11 ಕ್ಕೆ ಮುಂದೂಡಿದೆ ಮತ್ತು ಲಕ್ಷದ್ವೀಪ ಆಡಳಿತವು ತನ್ನ ಉತ್ತರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಾಗಿದೆ.


COMMERCIAL BREAK
SCROLL TO CONTINUE READING

ಕೇರಳ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ
ಇದಕ್ಕೂ ಮೊದಲು, ಮಧ್ಯಾಹ್ನದ ಊಟದ ಯೋಜನೆಯಿಂದ ಕೋಳಿ ಮತ್ತು ಮಟನ್ ಅನ್ನು ತೆಗೆದುಹಾಕುವ ನಿರ್ಧಾರವನ್ನು ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು, ಆದರೆ ನ್ಯಾಯಾಲಯವು ಸೆಪ್ಟೆಂಬರ್ 2021 ರಲ್ಲಿ ಅದನ್ನು ತಿರಸ್ಕರಿಸಿತ್ತು. ಇದರ ನಂತರ, ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಕೇರಳ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿದ್ದರು, ಅದರ ಮೇಲೆ ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ವಿಚಾರಣೆಯ ವೇಳೆ ಪ್ರಶ್ನೆಗಳನ್ನು ಎತ್ತಿದೆ.


ಇದನ್ನೂ ಓದಿ-Cyclone Mocha: ಭಾರಿ ಅನಾಹುತಕ್ಕೆ ಕಾರಣವಾಗಲಿದೆ ಮೋಚಾ ಚಂಡಮಾರುತ! ಅಲರ್ಟ್ ಜಾರಿಗೊಳಿಸಿದ ಹವಾಮಾನ ಇಲಾಖೆ


ಮಕ್ಕಳು ಇದರಿಂದ ಏಕೆ ವಂಚಿತರಾಗುತ್ತಿದ್ದಾರೆ: ಸುಪ್ರೀಂ ಕೋರ್ಟ್
ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮಕ್ಕಳು ಇದರಿಂದ ಏಕೆ ವಂಚಿತರಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಪೀಠ ಲಕ್ಷದ್ವೀಪ ಆಡಳಿತವನ್ನು ಪ್ರಶ್ನಿಸಿದೆ. ಈ ಕುರಿತು ಉತ್ತರ ನೀಡಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು ತಮ್ಮ ವಾದವನ್ನು ಮಂಡಿಸುತ್ತಾ, ಇದಕ್ಕಿಂತಲೂ ಉತ್ತಮವಾದುದನ್ನು ನೀಡಲಾಗುತ್ತಿದೆ ಎಂದಿದ್ದಾರೆ.  ಇದಕ್ಕೆ ಮತ್ತೆ ಪ್ರಶ್ನಿಸೀರುವ ಸುಪ್ರೀಂ ಕೋರ್ಟ್, ಯಾವುದು ಉತ್ತಮ? ಚಿಕನ್, ಮಟನ್ ಬದಲು ಡ್ರೈ ಫ್ರೂಟ್ಸ್ ತಿನ್ನುತ್ತಾರಾ? ಈ ಕುರಿತು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಮಟನ್ ಮತ್ತು ಚಿಕನ್ ಅನ್ನು ಪೂರಕ ವಸ್ತುವಾಗಿ ನೀಡಲಾಗುತ್ತಿದೆ ಎಂದಿದ್ದಾರೆ.


ಇದನ್ನೂ ಓದಿ-Share Market Update: ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಹೊಸ ಹುಮ್ಮಸ್ಸು, 18300 ಗಡಿ ದಾಟಿದ ನಿಫ್ಟಿ


ಲಕ್ಷದ್ವೀಪ ಆಡಳಿತದ ಈ ನಿರ್ಧಾರಕ್ಕೆ ಕಾರಣ ಏನು?
ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ನ್ಯಾಯಾಲಯದಲ್ಲಿ ಮಟನ್ ಮತ್ತು ಚಿಕನ್ ಅನ್ನು ಪೂರಕ ವಸ್ತುವಾಗಿ ನೀಡಲಾಗುತ್ತದೆ. ಇದೊಂದು ನೀತಿಗತ ನಿರ್ಧಾರವಾಗಿದ್ದು, ವಿವಿಧ ಅಂಶಗಳನ್ನು ಪರಿಶೀಲಿಸಿದ ನಂತರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪೌಷ್ಠಿಕಾಂಶದ ಅಂಶಗಳಲ್ಲಿನ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎಎಸ್‌ಜಿ ಹೇಳಿದ್ದಾರೆ. ಇದಾದ ಬಳಿಕ, ಅವುಗಳನ್ನು ನೀಡುವುದನ್ನು ಮುಂದುವರಿಸಿ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.