ಜೈಪುರ: ರೈತ ಮುಖಂಡ ರಾಕೇಶ್ ಟಿಕಾಯತ್ ಈ ಬಾರಿ ತಾವು 40 ಲಕ್ಷ ಟ್ರ್ಯಾಕ್ಟರ್ ಮೂಲಕ ಸಂಸತ್ತಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ದಿಲ್ಲಿ ಮಾರ್ಚ್‌ಗೆ ಸಿದ್ಧರಾಗುವಂತೆ ರೈತರಿಗೆ ಸೂಚಿಸಿದ್ದಾರೆ. ರಾಜಸ್ಥಾನದ ಸೀಕರ್‌ನಲ್ಲಿ ನಡೆದ ಸಂಯುಕ್ತ ರೈತ ; ರೈತ ಮಹಾಪಂಚಾಯತ್‌ನಲ್ಲಿ ಅವರು ಇಂತಹುದ್ದೊಂದು ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

 ಸಭೆಯನ್ನುದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್(Rakesh Tikait), ಕೇಂದ್ರ ಸರ್ಕಾರ ಕೃಷಿ ಕಾನೂನು ಹಿಂಪಡೆಯದಿದ್ದರೆ ಈ ಬಾರಿ ಸಂಸತ್ತಿಗೆ ಮುತ್ತಿಗೆ ಹಾಕುತ್ತೇವೆ. ಅಲ್ಲದೇ ನಾಲ್ಕು ಲಕ್ಷವಲ್ಲ ನಲ್ವತ್ತು ಲಕ್ಷ ಟ್ರ್ಯಾಕ್ಟರ್‌ಗಳು ಎಂಟ್ರಿ ನೀಡಲಿವೆ. ಯಾವಾಗ ಬೇಕಾದರೂ ಇಂತಹುದ್ದೊಂದು ಘೋಷಣೆಯಾಗಬಹುದು. ಹೀಗಾಗಿ ಸಿದ್ಧರಾಗಿರಿ ಎಂದು ಟಿಕಾಯತ್ ರೈತರಿಗೆ ಸೂಚಿಸಿದ್ದಾರೆ.


Mamata Banerjee: 'ಮೋದಿ ಒಬ್ಬ ದಂಗೆಕೋರ, ಟ್ರಂಪ್‌ಗೆ ಆದ ದುರ್ಗತಿ ಅವರಿಗೂ ಆಗಲಿದೆ'


ಇಂಡಿಯಾ ಗೇಟ್‌ ಬಳಿ ಉಳುಮೆ: ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಟಿಕಾಯತ್ ರೈತ(Farmers)ರೂ ದೆಹಲಿಯಲ್ಲಿದ್ದಾರೆ, ಟ್ರ್ಯಾಕ್ಟಟರ್‌ಗಳೂ ಅಲ್ಲೇ ಇವೆ. ಹೀಗಾಗಿ ಇಮಡಿಯಾ ಗೇಟ್‌ ಆಸುಪಾಸಿನ ಪಾರ್ಕ್‌ಗಳಲ್ಲೇ ಉಳುಮೆ ಮಾಡಿ, ಬೆಳೆ ಕೂಡ ಬೆಳೆಯುತ್ತೇವೆ. ಸಂಸತ್‌ ಘೇರಾವ್‌ ಯಾವಾಗ ಎಂದು ಸಂಯುಕ್ತ ಮೋರ್ಚಾ ನಿರ್ಧರಿಸಲಿದೆ ಎಂದೂ ತಿಳಿಸಿದ್ದಾರೆ.


Petrol-Diesel ಬೆಲೆ ಚಿಂತೆ ಬಿಟ್ಟು ಎಲೆಕ್ಟ್ರಿಕ್ ವಾಹನ ಖರೀದಿಸಿ, ಎಷ್ಟು ಲಕ್ಷ ಸಬ್ಸಿಡಿ ಸಿಗುತ್ತೆ ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.