ನವದೆಹಲಿ:  ಝೀ ನ್ಯೂಸ್‌ನ ಜನಪ್ರಿಯ ಪ್ರೈಮ್ ಟೈಮ್ ನ್ಯೂಸ್ ಶೋ ‘ಡಿಎನ್‌ಎ’ ಪ್ರೋಮೊ ಬಿಡುಗಡೆಯಾಗಿದೆ. ಡಿಎನ್‌ಎಯ ಈ ಹೊಸ ಪ್ರೋಮೋವನ್ನು ನಟ ಸೌರಭ್ ರಾಜ್ ಜೈನ್ ಬಿಡುಗಡೆ ಮಾಡಿದ್ದಾರೆ. ಕಿರುತೆರೆಯಲ್ಲಿ 'ಕೃಷ್ಣ' ಅವತಾರದಲ್ಲಿ ನಟ ಸೌರಭ್ ರಾಜ್ ಜೈನ್ ಅವರು ನಿಮ್ಮ ನೆಚ್ಚಿನ ಪ್ರೈಮ್ ಟೈಮ್ ನ್ಯೂಸ್ ಶೋ ಡಿಎನ್‌ಎ ಅನ್ನು ಪ್ರಸ್ತುತಪಡಿಸುತ್ತಾರೆ.


COMMERCIAL BREAK
SCROLL TO CONTINUE READING

ಡಿಎನ್‌ಎಯಲ್ಲಿನ ಪ್ರತಿಯೊಂದು ಸುದ್ದಿಯ ವಿಶ್ಲೇಷಣೆಗೆ ಅವರು ಹೊಸ ಮತ್ತು ಪಾಸಿಟಿವ್ ಬದಲಾವಣೆಗಳೊಂದಿಗೆ  ಆಯಾಮವನ್ನು ನೀಡುತ್ತಾರೆ., ನೀವು ಈಗ ಡಿಎನ್‌ಎಯಲ್ಲಿ ಹೊಸ ಶೈಲಿಯಲ್ಲಿ ಸುದ್ದಿಗಳ ಸಂಪೂರ್ಣ ವಿಶ್ಲೇಷಣೆಯನ್ನು ನೋಡಲಿದ್ದಿರಿ.ಅವರು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ‘ಡಿಎನ್‌ಎ’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ-ಮಳೆಗಾಲದಲ್ಲಿ ಕೀಲು ನೋವನ್ನು ನಿರ್ವಹಿಸಲು ಇಲ್ಲಿವೆ ಕೆಲ ಅತ್ಯುತ್ತಮ ವಿಧಾನಗಳು!


ಡಿಎನ್‌ಎಯ ಈ ಪ್ರೋಮೋದಲ್ಲಿ ಸೌರಭ್ ರಾಜ್ ಜೈನ್ ದೇಶದ ಹಲವು ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರುವುದನ್ನು ನೀವು ಕಾಣಬಹುದಾಗಿದೆ..ಝೀ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಡಿಎನ್‌ಎ ಪ್ರೋಮೋವನ್ನು ಬಿಡುಗಡೆ ಮಾಡಿದ ಸೌರಭ್ ರಾಜ್ ಜೈನ್ ಅವರು 'ಡಿಎನ್‌ಎ'ಯಲ್ಲಿ ಬರುವ ಸುದ್ದಿ ಮತ್ತು ಸುದ್ದಿಗಳ ಮಹತ್ವವನ್ನು ವಿವರಿಸುತ್ತಿದ್ದಾರೆ.ಪ್ರೋಮೋದಲ್ಲಿ ಸಾಮಾನ್ಯ ಜನರಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಸೌರಭ್ ರಾಜ್ ಜೈನ್, ಈಗ ಸಾರ್ವಜನಿಕರ ಭಾಗವಾಗಿ ಸುದ್ದಿಯಲ್ಲಿ ಮಾತನಾಡುತ್ತಾರೆ ಎಂದು ಹೇಳುತ್ತಿದ್ದಾರೆ.ಸಾಮಾನ್ಯ ಮನುಷ್ಯನಿಗೆ ಮುಖ್ಯವಾದ ಸುದ್ದಿ ಯಾವುದು, ಎನ್ನುವುದು ಸಾಮಾನ್ಯ ಮನುಷ್ಯನಿಗೆ ಮಾತ್ರ ತಿಳಿದಿದೆ. ಆದ್ದರಿಂದ ಸುದ್ದಿಯ ಪ್ರತಿಯೊಂದು ಅಂಶವನ್ನು ಪರಿಶೀಲಿಸಿದ ನಂತರ ನಿಮ್ಮ ಮುಂದೆ ತರಲಾಗುವುದು. 


ಸೂಕ್ತ ಸಂತಾನ ಭಾಗ್ಯ ಪ್ರಾಪ್ತಿ ಹೇಗೆ ಮಾಡಿಕೊಳ್ಳಬೇಕು? ಗರ್ಭಧಾರಣೆಗೆ ಯಾವ ದಿನಗಳು ಶುಭ? 


ಸೌರಭ್ ರಾಜ್ ಜೈನ್ ಅವರು 2004 ರಲ್ಲಿ ಟಿವಿ ಸರಣಿ ರೀಮಿಕ್ಸ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ ಕಳೆದ 19 ವರ್ಷಗಳಲ್ಲಿ ಅವರು ತಮ್ಮ ಗಂಭೀರತೆ ಮತ್ತು ಸಹಾನುಭೂತಿಯಿಂದ ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.