ಬೆಂಗಳೂರು: ವಿಜಯನಗರದಿಂದ ಜಯನಗರಕ್ಕೆ 1 ಕೋಟಿ ಹಣ ಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಹಣವನ್ನು ವಶಕ್ಕೆ ತೆಗೆದುಕೊಂಡು ಇಬ್ಬನ್ನು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬೆಂಗಳೂರಿನ ನಾಗರಿಕರೇ ಎಚ್ಚರ! ಈ ಬಾರಿಯ ಮಳೆಗೆ ನಿಮ್ಮ ಏರಿಯಾವು ನೀರಿನಿಂದ ಮುಳುಗಡೆ ಆಗಬಹುದು ಹುಷಾರ್..!!


ಹಣ ತಂದಿದ ವ್ಯಕ್ತಿಗಳನ್ನು ಸುರೇಶ ಮತ್ತು ಪ್ರವೀಣ್ ಎನ್ನಲಾಗಿದ್ದು, ಇಬ್ಬರು ಬಿಬಿಎಂಪಿ ಆಫೀಸ್ ಮುಂಭಾಗದಲ್ಲಿ ಹಾಳಾಗಿದ್ದ ಆಟೋದಲ್ಲಿ ಇಟ್ಟುಕೊಂಡು ಬಂದಿದ್ದರು ಎನ್ನಲಾಗಿದೆ.ಇದೆ ವೇಳೆ ಅಲ್ಲೇ ಚೆಕ್ಕಿಂಗ್ ಮಾಡಲು ನಿಂತಿದ್ದ ಪೊಲೀಸರು ಇಬ್ಬರು ವ್ಯಕ್ತಿಗಳು ತಮ್ಮನ್ನು ನೋಡಿ ಅನುಮಾನಾಸ್ಪಾದವಾಗಿ ವರ್ತಿಸುವುದನ್ನು ಗಮನಿಸಿದ್ದಾರೆ.ಆಗ ಅವರು ಹಿಡಿದಿದ್ದ ಬ್ಯಾಗ್ ನ್ನು ಚೆಕ್ ಮಾಡಿದಾಗ ಒಂದು ಕೋಟಿ ರೂ ಪತ್ತೆಯಾಗಿದೆ.MP Kumaraswamy: ಕೈ ತಪ್ಪಿದ್ದ ಟಿಕೆಟ್‌ : ಬಿಜೆಪಿಗೆ ರಾಜೀನಾಮೆ ನೀಡಿದ ಎಂ. ಪಿ ಕುಮಾರಸ್ವಾಮಿ !


ಈ ಹಣವು ಜಯನಗರದ ಬಿಜೆಪಿ ನಾಯಕರೋಬ್ಬರಿಗೆ ತಲುಪಿಸಬೇಕಾಗಿತ್ತು ಎಂದು ಅವರು ವಿಚಾರಣೆ ವೇಳೆ ಇಬ್ಬರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.ಈ ಹಣವನ್ನು ರಾಜೇಶ್ ಎಂಟರ್ಪ್ರೈಸ್ ನಿಂದ ತರಲಾಗಿದ್ದು ಎನ್ನಲಾಗಿದೆ.ಈಗ ಸದ್ಯಕ್ಕೆ ಹಣವನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.