ಚಾಮರಾಜನಗರ : ಚುನಾವಣೆ ಮುಗಿದು ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಮತ್ತೊಂದು ಕಡೆ ಪಕ್ಷಗಳ ಅಭಿಮಾನಿಗಳು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆಂಬ ರಣೋತ್ಸಾಹದಲ್ಲಿದ್ದಾರೆ. ಅಲ್ಲದೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಟಿಗಟ್ಟಲೇ ಹಣ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಇದೀಗ ಪುರಸಭೆ ಸದಸ್ಯರೊಬ್ಬರು ಬಿಜೆಪಿ ಪರ ಒಂದು ಕೋಟಿ ರೂ. ಹಣ ಬೆಟ್‌ ಕಟ್ಟಿ ಕಾಂಗ್ರೆಸ್ಸಿಗರಿಗೆ ಆಹ್ವಾನ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷದ ಅಭಿಮಾನಿಯೊಬ್ಬ 3 ಲಕ್ಷ ಹಣ ಹಿಡಿದು ಬೆಟ್‌ಗೆ ಆಹ್ವಾನಿಸಿದ ಬೆನ್ನಲ್ಲೇ ಗುಂಡ್ಲುಪೇಟೆ ಪುರಸಭೆಯ ಬಿಜೆಪಿ ಸದಸ್ಯ ಕಿರಣ್ ಎಂಬವರು ಕಂತೆ-ಕಂತೆ ನೋಟ್ ಮುಂದೆ ನಿಂತು ಬೆಟ್ ಕಟ್ಟುವಂತೆ ಕೈ ಪಡೆಗೆ ಆಹ್ವಾನಿಸಿದ್ದಾರೆ. ಅಲ್ಲದೆ, ಶಾಸಕ ನಿರಂಜನಕುಮಾರ್ ಅತ್ಯಧಿಕ ಮತಗಳಿಂದ ಈ ಬಾರಿ ಜಯಗಳಿಸುತ್ತಾರೆ ಎಂದು 1 ಕೋಟಿ ತನಕವೂ ಬೆಟ್ ಕಟ್ಟುತ್ತೇವೆ, ಪಂಥ ಕಟ್ಟುವವರು ಬರಬಹುದು ಎಂದು ಕಿರಣ್ ಆಹ್ವಾನ ಕೊಟ್ಟಿದ್ದಾರೆ. ಸದ್ಯ ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ: ʼಬಿಜೆಪಿʼ ತಂತ್ರಗಾರಿಕೆಗೆ ಬಲಿಯಾಗದಂತೆ ತಡೆಯಲು ಅಭ್ಯರ್ಥಿಗಳ ಸಭೆ ಕರೆದ ʼಕಾಂಗ್ರೆಸ್‌ʼ..!


ಅಲ್ಲದೆ, ಮೈಸೂರಿನ ಕೆ.ಆರ್‌. ನಗರದಲ್ಲಿ ಬೆಟ್ಟಿಂಗ್ ಭರಾಟೆ ಮುಂದುವರೆದಿದ್ದು, ಡಿ.ರವಿಶಂಕರ್ ಪರ ಅವರ ಅಭಿಮಾನಿಗಳು 5 ಲಕ್ಷ ನಗದು, 30 ಕುಂಟೆ ಭೂಮಿ ಬೆಟ್ ಕಟ್ಟಲು ಸಿದ್ದರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಗೆಲ್ಲುತ್ತಾರೆ ಎಂದು ಚಾಲೆಂಜ್‌ ಮಾಡುತ್ತಿದ್ದಾರೆ. ಸಾರಾ ಮಹೇಶ್ ಕಡೆಯವರು ಯಾರಿದ್ದರು ಬೆಟ್‌ ಕಟ್ಟಿ ಎಂದು ವ್ಯಕ್ತಿ ಸವಾಲ್‌ ಹಾಕಿದ್ದಾನೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ