ಬೆಂಗಳೂರು: ರಾಜ್ಯದ 224 ಕ್ಷೇತ್ರಗಳ ವಿಧಾನಸಭಾ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ. ಯಾವ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ದೊರೆಯಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸರ್ಕಾರ ರಚಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಫಲಿತಾಂಶ ಅತಂತ್ರವಾದರೆ ಮುಂದೇನು ಮಾಡುವುದು ಅನ್ನೋದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಬಿಜೆಪಿ 108ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಶುಕ್ರವಾರ ಮಾತನಾಡಿದ ಅವರು, ‘ಈಗಾಗಲೇ ವಿವಿಧ ಚಾನಲ್‍ಗಳು ಸಮೀಕ್ಷೆ ಮಾಡಿವೆ. 2018ರಲ್ಲೂ ಸಮೀಕ್ಷೆ ಆಗಿತ್ತು. ಅದಕ್ಕೂ, ಇದಕ್ಕೂ ವ್ಯತ್ಯಾಸ ಇದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: "ಕಪ್ಪು ಹಾಗೂ ಟೋಪಿ ಎಲ್ಲವನ್ನೂ ಅವರೇ ಇಟ್ಟುಕೊಳ್ಳಲಿ"


2018ರ ಚುನಾವಣೆಯಲ್ಲಿ ಪ್ರಮುಖ ಚಾನಲ್‍ಗಳು ಸಮೀಕ್ಷೆ ನೀಡಿದ್ದವು. ಈಗ ಬಿಜೆಪಿ ಬೂತ್, ವಿಧಾನಸಭೆ ಮಟ್ಟದಲ್ಲಿ ತೆಗೆದುಕೊಂಡ ಫೀಡ್ ಬ್ಯಾಕ್‍ನಲ್ಲಿ ನಾವು 108 ಸೀಟ್ ಗೆಲ್ಲುತ್ತೇವೆ. 35 ಕ್ಷೇತ್ರದಲ್ಲಿ 50:50 ಇದ್ದು, ಇದರಲ್ಲಿ 10 ಸೀಟ್ ಗೆಲ್ಲುತ್ತೇವೆ‌’ ಎಂದು ಹೇಳಿದ್ದಾರೆ.


ನಾವು ಜೆಡಿಎಸ್ ಜೊತೆ ಹೋಗುವ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಬೂತ್ ಮಟ್ಟ, ವಿಧಾನಸಭೆವಾರು ಮಾಹಿತಿ ತರಿಸಿಕೊಂಡಿದ್ದೇವೆ. ಈ ಬಗ್ಗೆ ಮುಂದೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ನಾಳಿನ ಫಲಿತಾಂಶದ ಬಗ್ಗೆ ನಮಗೂ ಕುತೂಹಲವಿದೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.


ಇದನ್ನೂ ಓದಿ: Koppal Assembly Election 2023: ಕೊಪ್ಪಳ ಜಿಲ್ಲೆಯ ‘ಕುರುಕ್ಷೇತ್ರ’ದಲ್ಲಿ ಯಾರಿಗೆ ಗೆಲುವು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.