Karnataka Election Result 2023: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕಾಂಗ್ರೆಸ್, ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು
Karntaka Assembly election result : ಈ ಬಾರಿಯ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಈಗಾಗಲೇ ನಿರ್ಧರಿಸಿ ಆಗಿದೆ. ಮತ ಎಣಿಕೆ ನಡೆಯುತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಯಾರಿಗೆ ಮುನ್ನಡೆ ಯಾರಿಗೆ ಹಿನ್ನಡೆ ಎಲ್ಲಾ ಅಪ್ಡೇಟ್ ಇಲ್ಲಿದೆ.
Karnataka Assembly Election Result : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಮತ್ತು ಮಂಗಳೂರು ಕ್ಷೇತ್ರದಲ್ಲಿ ಯುಟಿ ಖಾದರ್ ಗೆಲುವಿನ ಬಗೆ ಬೀರಿದ್ದಾರೆ. 2018ಕ್ಕೆ ಹೋಲಿಸಿದರೆ ಜಿಲ್ಲೆ ಒಂದು ಕ್ಷೇತ್ರವನ್ನು ಕಳೆದುಕೊಂಡಿದೆ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯಲ್ಲಿ 7 ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಪುತ್ತೂರು ಕ್ಷೇತ್ರ ಬಿಜೆಪಿಯ ಕೈ ತಪ್ಪಿದೆ.
ಮಂಗಳೂರು ದಕ್ಷಿಣ ಕ್ಷೇತ್ರ :
ಬಿಜೆಪಿಯ ಡಿ. ವೇದವ್ಯಾಸ ಕಾಮತ್ ಮತ್ತೊಮ್ಮೆ ಗೆದ್ದು ಬಂದಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಜೆ.ಆರ್. ಲೋಬೊ, ಅವರನ್ನು ಮತ್ತೊಮ್ಮೆ ಪರಾಭವಗೊಳಿಸಿದ್ದಾರೆ. ಇದು ವೇದವ್ಯಾಸ್ ಕಾಮತ್ ಅವರ ಎರಡನೇ ಗೆಲುವು.
ಅಭ್ಯರ್ಥಿಗಳು ಪಡೆದ ಮತಗಳು :
ಬಿಜೆಪಿ - ಡಿ. ವೇದವ್ಯಾಸ್ ಕಾಮತ್ -89998
ಕಾಂಗ್ರೆಸ್ - ಜೆ.ಆರ್. ಲೋಬೊ - 66451
ಜೆಡಿಎಸ್ -ಸುಮತಿ ಎಸ್. ಹೆಗಡೆ -689
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ:
ಈ ಕ್ಷೇತ್ರದಲ್ಲಿ ಬಿಜೆಒಇಯ ಭರತ್ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿಯನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದಾರೆ. ಸುಮಾರು 40 ಸಾವಿರಕ್ಕೂ ಅಧಿಕ ಮತಗಳಿಂದ ಇಲ್ಲಿ ಭರತ್ ಶೆಟ್ಟಿ ಜಯ ಗಳಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಕಾಂಗ್ರೆಸ್ - ಇನಾಯತ್ ಅಲಿ - 69891
ಬಿಜೆಪಿ - ಭರತ್ ಶೆಟ್ಟಿ ವೈ - 102231
ಜೆಡಿಎಸ್ - ಮೊಯಿದ್ದೀನ್ ಬಾವ - 5211
ಮಂಗಳೂರು ವಿಧಾನಸಭಾ ಕ್ಷೇತ್ರ:
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಯೂ ಟಿ ಖಾದರ್ ಭಾರೀ ಅಂತರದಿಂದ ಗೆದ್ದಿದ್ದಾರೆ. ಈ ಮೂಲಕ ಮಂಗಳೂರು ಕ್ಷೇತ್ರ ಕಾಂಗ್ರೆಸ್ ನ ಭದ್ರ ನೆಲೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಕಾಂಗ್ರೆಸ್ - ಯು.ಟಿ. ಖಾದರ್ ಫರೀದ್ - 82637
ಬಿಜೆಪಿ - ಸತೀಶ್ ಕುಂಪಲ - 59660
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ - ರಿಯಾಜ್ ಫರಂಗಿಪೇಟೆ - 15029
ಬಂಟ್ವಾಳ ವಿಧಾನಸಭಾ ಕ್ಷೇತ್ರ:
ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ರಾಜೇಶ್ ನಾಯ್ಕ್ ಕಾಂಗ್ರೆಸ್ ನ ಹಿರಿ ತಲೆ ರಮಾನಾಥರೈ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಕಾಂಗ್ರೆಸ್ - ಬಿ. ರಮಾನಾಥ ರೈ -84193
ಬಿಜೆಪಿ - ರಾಜೇಶ್ ನಾಯ್ಕ್ - 92047
ಜೆಡಿಎಸ್ - ಪ್ರಕಾಶ್ ಗೋಮ್ಸ್ ಯು - 448
ಪುತ್ತೂರು ವಿಧಾನಸಭಾ ಕ್ಷೇತ್ರ:
ಪುತ್ತೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಕಾಂಗ್ರೆಸ್ ನ ಅಶೋಕ ರೈ ಗೆಲುವಿನ ನಗೆ ಬೀರಿದ್ದಾರೆ. ಇವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಸೋಲಿಸಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಕಾಂಗ್ರೆಸ್ - ಅಶೋಕ್ ಕುಮಾರ್ ರೈ - 65923
ಪಕ್ಷೇತರ - ಅರುಣ್ ಕುಮಾರ್ ಪುತ್ತಿಲ -61628
ಬಿಜೆಪಿ - ಆಶಾ ತಿಮ್ಮಪ್ಪ - 36733
ಸುಳ್ಯ ವಿಧಾನಸಭಾ ಚುನಾವಣಾ ಕ್ಷೇತ್ರ:
ಸುಳ್ಯದಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿಯ ಆಯ್ಕೆಯಾಗಿ ಬಂದಿದ್ದಾರೆ. ಬಿಜೆಪಿಯ ಭಾಗೀರಥಿ ಮುರುಳ್ಯ, ಗೆಲುವು ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಕಾಂಗ್ರೆಸ್ - ಜಿ. ಕೃಷ್ಣಪ್ಪ ರಾಮಕುಂಜ -62345
ಬಿಜೆಪಿ - ಭಾಗೀರಥಿ ಮುರುಳ್ಯ -92344
ಜೆಡಿಎಸ್ - ಎಚ್.ಎಲ್ ವೆಂಕಟೇಶ್ - 1812
ಮೂಡಬಿದ್ರೆ ವಿಧಾನಸಭಾ ಕ್ಷೇತ್ರ:
ಬಿಜೆಪಿಯ ಉಮಾನಾಥ್ ಕೋಟ್ಯಾನ್, ಕಾಂಗ್ರೆಸ್ ನ ಮಿಥುನ್ ರೈ ಅವರನ್ನು ಸೋಲಿಸಿದ್ದಾರೆ. ಉಮಾನಾಥ ಕೋಟ್ಯಾನ್ ಈ ಗೆಲುವಿನೊಂದಿಗೆ ಎರಡನೇ ಬಾರಿ ಶಾಸಕರಾಗಿ ಗೆದ್ದು ಬಂದಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಬಿಜೆಪಿ - ಉಮಾನಾಥ್ ಕೋಟ್ಯಾನ್ - 85858
ಕಾಂಗ್ರೆಸ್ - ಮಿಥುನ್ ಎಂ. ರೈ - 63575
ಜೆಡಿಎಸ್ -ಡಾ. ಅಮರಶ್ರೀ ಅಮರನಾಥ ಶೆಟ್ಟಿ -1505
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ:
ಈ ಕ್ಷೇತ್ರದಲ್ಲಿ ಬಿಜೆಪಿಯ ಹರೀಶ್ಪೂಂಜ ವಿಜಯ ಪತಾಕೆ ಹಾರಿಸಿದ್ದಾರೆ. ಇವರು ಕಾಂಗ್ರೆಸ್ ನ ರಕ್ಷಿತ್ ಶಿವರಾಂ ಅವರನ್ನು ಸೋಲಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಬಿಜೆಪಿ - ಹರೀಶ್ಪೂಂಜ - 99489
ಕಾಂಗ್ರೆಸ್ - ರಕ್ಷಿತ್ ಶಿವರಾಂ - 81840
ಜೆಡಿಎಸ್ - ಅಶ್ರಫ್ಲಿಕುಂಞ ಮುಂಡಾಜೆ -550
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.