Karnataka Assembly Election 2023 : ಚುನಾವಣೆ ಸಮೀಸುತ್ತಿದ್ದಂತೆ ಅನೇಕ ಅಕ್ರಮ ಸಾಗಾಣಿಕೆಗಳು, ಕಪ್ಪು ಹಣದಂತಹ ಮುಂತಾದ ಕ್ರಿಯೆಗಳು ನಡೆಯುತ್ತಿರುತ್ತವೆ. ಇವುಗಳಿಗೆ ಬ್ರೇಕ್‌ ಹಾಕಲು ಲೋಕಾಯುಕ್ತರು ಆಕಸ್ಮಿಕವಾಗಿ ರಾಜಕೀಯ ಮುಖಂಡರ ಮನೆಗೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ನನ್ನನ್ನೂ ಸೇರಿದಂತೆ ರಾಜ್ಯದ 50 ರಾಜಕೀಯ ಮುಖಂಡರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸುವ ಸಂಚು ನಡೆದಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್‌ ಕಿಡಿಕಾರಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಅತಿಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ರಾಮಣ್ಣನ ಕಾಲದಲ್ಲಿ : ಸಿಎಂ ಬೊಮ್ಮಾಯಿ


ಈ ಕುರಿತು ಬೆಳಗಾವಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಚುನಾವಣೆಗೆ ಕೇವಲ ಹತ್ತು ದಿನಗಳು ಮಾತ್ರ ಬಾಕಿ ಇವೆ, ನಮಗೆ ಈಗ ಪ್ರತಿ ಕ್ಷಣವು ಮುಖ್ಯ. ಆದರೆ ಈ ಸಂದರ್ಭದಲ್ಲಿ ನಾವು ಪ್ರಚಾರ ಕಾರ್ಯದಲ್ಲಿ ಭಾಗಿಯಾಗದಂತೆ ಕಟ್ಟಿ ಹಾಕುವ ಸಂಚು ಮಾಡಿದೆ ನನ್ನನ್ನೂ ಸೇರಿದಂತೆ ರಾಜ್ಯದ 50 ಮುಖಂಡರ ಮನೆಗೆ ದಾಳಿ ನಡೆಸುವ ಷಡ್ಯಂತ್ರವನ್ನು ಬಿಜೆಪಿ ರೂಪಿಸಿದೆ" ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಇದನ್ನೂ ಓದಿ-"ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ದಿಯನ್ನು ಅರ್ಥಮಾಡಿಕೊಂಡಿದ್ದಾರೆ"


ಬಿಜೆಪಿಯವರು ವಾಮಾ ಮಾರ್ಗಯವರು ವಾಮಾ ಮಾರ್ಗ ಹಿಡಿದಿದ್ದಾರೆ. ಮತದಾರರ ಗಮನವನ್ನು ಬೇರೆ ಕಡೆ ಸೆಳೆಯುತ್ತಿದ್ದಾರೆ. ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಯಾಚಿಸುವುದು ಬಿಟ್ಟು ಈ ರೀತಿ ಬೆದರಿಕೆ ತಂತ್ರವನ್ನು ರೂಪಿಸಿದರೆ ಅದು ಅವರಿಗೆ ಮುಳುವಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.