ಬೆಂಗಳೂರು: ಅಗ್ನಿಪತ್ ಯೋಜನೆ ದೇಶ ಹಾಗೂ ರಾಷ್ಟ್ರ ಭದ್ರತೆಗೆ ಸೂಕ್ತವಲ್ಲ. ನಮ್ಮ ದೇಶದ ಭದ್ರತೆ ಜತೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಸೈನಿಕರು ಆರೋಪಿಸಿದ್ದಾರೆ.ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


COMMERCIAL BREAK
SCROLL TO CONTINUE READING

ಮಾಜಿ ಸೈನಿಕರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:


ಅಗ್ನಿಪತ್ ಯೋಜನೆ 15 ಜೂನ್, 2022ರಂದು ಜಾರಿಗೆ ತರಲಾಯಿತು. ಸೆಪ್ಟೆಂಬರ್ 2022ರಿಂದ ಅನುಷ್ಠಾನಗೊಳಿಸಲಾಯಿತು. ಈ ಯೋಜನೆಯಲ್ಲಿ ಒಬ್ಬ ಯೋಧ ಭರ್ತಿಯಾದ ನಂತರ 4 ವರ್ಷ ಅಗ್ನಿವೀರ್ ಸ್ಥಾನದಲ್ಲಿ ಸೇವೆ ಸಲ್ಲಿಸಬಹುದು. ಇವರ ವಯಸ್ಸು 17ರಿಂದ 21 ವರ್ಷ. ಇವರಿಗೆ 6 ತಿಂಗಳು ತರಬೇತಿ ನೀಡಿ, 1 ವರ್ಷ ರಜೆ ನೀಡಿ, 2 ವರ್ಷ ನಿಯೋಜಿತ ಸೇವೆಯಲ್ಲಿ ನಿರತರಾಗಬಹುದು.


ಮೊದಲ ವರ್ಷ 46 ಸಾವಿರ ಮಂದಿ ಭರ್ತಿಯಾಗಲು ಅವಕಾಶ. ನಂತರ ಕ್ರಮೇಣ ಹೆಚ್ಚಳ ಮಾಡಿ 75 ಸಾವಿರದಿಂದ 1 ಲಕ್ಷ ಮಂದಿ ನೇಮಕ. ಈಗ ಕೇಂದ್ರ ಸರ್ಕಾರ ಕೆಲವು ನಿಯಮ ತಂದಿದ್ದು, ಕೇವಲ 25% ಯೋಧರನ್ನು ಸೇವೆಯಲ್ಲಿ ಮುಂದುವರಿಸಿ, 75% ಯೋಧರನ್ನು ಸೇವೆಯಿಂದ ವಿಮುಖಗೊಳಿಸಲಾಗುವುದು.  ಸೇವೆಯಿಂದ ಹೊರಬಂದು ಯುವಕರಿಗೆ ಯಾವ ರೀತಿಯ ಉದ್ಯೋಗ ಕಲ್ಪಿಸುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇದು ಕೇವಲ ಆಶ್ವಾಸನೆ ಇದೆ. 
ಅಗ್ನಿಪತ್ ಯೋಜನೆ ಜಾರಿ ತರಲು ಕಾರಣ ಎಂದರೆ, ಕೇಂದ್ರದ ಪ್ರಕಾರ ನಮ್ಮ ಸೇನೆಯಲ್ಲಿ ಸರಾಸರಿ ವಯಸ್ಸಿನ ಪ್ರಮಾಣ ಕಡಿಮೆ ಮಾಡುವುದು. ಸದ್ಯ ನಮ್ಮ ಸೇನೆಯಲ್ಲಿ 32 ವರ್ಷ ಸರಾಸರಿ ವಯಸ್ಸಾಗಿದೆ. ಇದುನ್ನು 26 ವರ್ಷಕ್ಕೆ ಮಾಡಬೇಕು. ಆಗ ನಮ್ಮ ಸೇನೆ ಯುವಪಡೆಯಾಗಿರುತ್ತದೆ. ಇನ್ನು ಪಿಂಚಣಿ ಬಿಲ್ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡಬೇಕು. ಈ ಪಿಂಚಣಿ ಮಸೂದೆಯಲ್ಲಿ ಏನಿದೆ ಎಂದರೆ ಬಜೆಟ್ ನಲ್ಲಿ 32% ಹಾಲಿ ಸೈನಿಕರ ವೇತನಕ್ಕೆ, 26% ಪಿಂಚಣಿಯಾಗಿ ಮಾಜಿ ಸೈನಿಕರಿಗೆ ಸೇರುತ್ತದೆ. ಉಳಿದ ಹಣ ಬಂಡವಾಳ ಹೂಡಿಕೆ ಹಣವಾಗಿದೆ.


ಇಲ್ಲಿ ನಮ್ಮ ಮುಂದೆ 2 ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ದೇಶದ ಸೇನೆಯ ಸರಾಸರಿ ವಯಸ್ಸು 32, ಅಮೆರಿಕದ ಸೇನೆಯ ಸರಾಸರಿ ವಯಸ್ಸು 28.ಚೀನಾದ ಸೇನೆ ಮತ್ತು ಬ್ರಿಟನ್ ಸೇನೆಯದ್ದು 26 ವರ್ಷ.  1948, 65, 71 ಹಾಗೂ ಕಾರ್ಗಿಲ್ ಯುದ್ಧ ಶ್ರೀಲಂಕಾದಲ್ಲಿ ಶಾಂತಿ ಕಾಪಾಡುವ ಆಪರೇಷನ್ ಮಾಡಿದ್ದೇವೆ. ಎಲ್ಲ ಯುದ್ಧಲ್ಲೂ ಯಶಸ್ಸು ಕಂಡಿದ್ದೇವೆ. ನಮ್ಮ ಸೈನಿಕರ ಧೈರ್ಯ, ಶೌರ್ಯ, ಉತ್ಸಾಹದ ಫಲ. ಇಂತಹ ಪರಿಸ್ಥಿತಿಯಲ್ಲಿ ಸೇನೆ ಸರಾಸರಿ ವಯಸ್ಸು ಇಳಿಸುವ ಅಗತ್ಯವೇನು?


ಮಾಜಿ ಸೈನಿಕರಿಗೆ ಹೋಗುತ್ತಿರುವ ಪಿಂಚಣಿ ಲಾಭ ಪಡೆಯುತ್ತಿರುವವರು ನಮ್ಮ ಸೈನಿಕರು ಹಾಗೂ ಅವರ ಕುಟುಂಬದವರು. ಕೇಂದ್ರ ಸರ್ಕಾರ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಬಳಕೆ ಮಾಡಿ ಪಿಂಚಣಿ ಬಿಲ್ ಒತ್ತಡ ಕಡಿಮೆ ಮಾಡಬಹುದು. ಆದರೆ ಇಲ್ಲಿ ಕೇಂದ್ರ ಸರ್ಕಾರ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ.ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥರಾದ ನರವಣೆ ಅವರು 4 ಸ್ಟಾರ್ ಆಫ್ ಡೆಸ್ಟಿನಿ ಎಂಬ ಪುಸ್ತಕ ಬಿಡುಗಡೆಗೆ ಮುಂದಾಗಿದ್ದು, ಅದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಕಾರಣ ಆ ಪುಸ್ತಕದಲ್ಲಿ ದೇಶದ ಎಲ್ಲಾ ಗಡಿ ಸಮಸ್ಯೆಗಳ ಮಾಹಿತಿ ಇದೆ. ಚೀನಾ ಗಡಿ ಸಮಸ್ಯೆ, ಪಾಕಿಸ್ತಾನ, ಅಗ್ನಿಪತ್ ಯೋಜನೆ ವಿಚಾರವಿದೆ. ಈ ಯೋಜನೆ ಕೇವಲ ಉದ್ಯೋಗ ಸೃಷ್ಟಿಗೆ ತಂದಿರುವ ಯೋಜನೆ. ಈ ಯೋಜನೆ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಯಾಗಿಲ್ಲ. ಡಿಫಎನ್ಸ್ ಸ್ಟಾಂಡಿಗ್ ಕಮಿಟಿ ವಿಶ್ವಾಸಕ್ಕೆ ಪಡೆದಿಲ್ಲ. ಸೇನಾ ಪಡೆಗಳ ಅಭಿಪ್ರಾಯ ಪಡೆದಿಲ್ಲ. ಏಕಾಏಕಿ ಈ ಯೋಜನೆ ಜಾರಿಗೆ ತಂದಿದ್ದಾರೆ.


ಅಗ್ನಿಪತ್ ಯೋಜನೆ ದೇಶ ಹಾಗೂ ರಾಷ್ಟ್ರ ಭದ್ರತೆಗೆ ಸೂಕ್ತವಲ್ಲ. ನಮ್ಮ ದೇಶದ ಭದ್ರತೆ ಜತೆ ರಾಜಿ ಮಾಡಿಕೊಳ್ಳಲಾಗುತ್ತಿದೆ. ಚೀನಾ ಸೇನೆಯಲ್ಲಿ 20 ಲಕ್ಷ ಸೈನಿಕರಿದ್ದಾರೆ. ಇದರಲ್ಲಿ 5 ಲಕ್ಶ ಬಲವಂತವಾಗಿ ಸೇರ್ಪಡೆ ಮಾಡಿಕೊಂಡಿರುವ ಸೈನಿಕರು. ಇತ್ತೀಚೆಗೆ ಡೋಕ್ಲಾಮ್ ನಲ್ಲಿ ನಮ್ಮ ಸೈನಿಕರು ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಅಲ್ಲಿ ಬಲವಂತವಾಗಿ ಸೇರಿಸಲಾಗಿದ್ದ ಚೀನಾ ಸೈನಿಕರ ನಿಯೋಜನೆಯಾಗಿತ್ತು. ಅವರು ಪೂರ್ಣ ಪ್ರಮಾಣದ ತರಬೇತಿ ಪಡೆದಿರುವುದಿಲ್ಲ. ನಮ್ಮ ಸೈನಿಕರು ಸುದೀರ್ಘ 7 ವರ್ಷಗಳ ಕಠಿಣ ತರಬೇತಿ ಪಡೆದಿರುತ್ತಾರೆ. ಈಗ ಅಗ್ನಿಪತ್ ಯೋಜನೆಯಲ್ಲಿ 6 ತಿಂಗಳ ತರಬೇತಿ ಪಡೆದು ಏನು ಮಾಡುತ್ತಾರೆ? ರೆಜಿಮೆಂಟ್ ವ್ಯವಸ್ಥೆಗಳನ್ನು ಕಿತ್ತುಹಾಕಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.