ಮಂಡ್ಯ : ಸರ್ಕಾರ ಬಡವರ ಉದ್ಧಾರಕ್ಕೆ ಹಲವು ಯೋಜನೆಗಳನ್ನು ತಂದಿದೆ. ಆದರೆ ಇದರಲ್ಲಿ ಅದೆಷ್ಟೋ ಯೋಜನೆಗಳು ಅವರಿಗೆ ತಲುಪುತ್ತಲೇ ಇಲ್ಲ. ಬಡವರು ಉಪವಾಸ ಇರಬಾರದೆಂಬ ಉದ್ದೇಶದಿಂದ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅನ್ನಭಾಗ್ಯ ಯೋಜನೆಯನ್ನು ನಡೆಸುತ್ತಿದೆ. ಆದರೆ ಅದರಲ್ಲಿಯೂ ವಂಚನೆ ನಡೆದಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ. 


COMMERCIAL BREAK
SCROLL TO CONTINUE READING

ಸಿಎಂ ಸಿದ್ದರಾಮಯ್ಯನವರು ನೋಡಲೇಬೇಕಾದ ಸ್ಟೋರಿ ಇದು. ಸರ್ಕಾರದ ಮಹಾತ್ವಾಕಾಂಕ್ಷೆಯ ಅನ್ನಭಾಗ್ಯ ಅಕ್ಕಿಗೆ ಸೊಸೈಟಿಯಲ್ಲಿಯೇ ಕನ್ನ ಹಾಕಲಾಗ್ತಿದೆ ಎಂದು ಆರೋಪಿಸಲಾಗಿದೆ. ಈ ಊರಿನ ಬಡ ಜನರಿಗೆ ಕಳೆದ ಎರಡು ತಿಂಗಳಿಂದ ಅಕ್ಕಿ ಕೊಡದೆ ವಂಚನೆ ಮಾಡಲಾಗುತ್ತಿದೆ. 


ಮಂಡ್ಯದ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದಲ್ಲಿ ಇಂಥದ್ದೊಂದು ಆರೋಪ ಕೇಳಿಬಂದಿದೆ. ತಳಗವಾದಿ ಗ್ರಾಮದ ಪ್ರಾ.ಕೃ.ಪ.(ಪ್ರಾಥಮಿಕ ಕೃಷಿ ಪತ್ತಿನ) ಸೊಸೈಟಿ ಯಿಂದ ಜನರಿಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 


ಇದನ್ನೂ ಓದಿ : "ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು" 


ಕಳೆದ ಎರಡು ತಿಂಗಳಿಂದ ಈ ಗ್ರಾಮದ ಬಡ ಜನರಿಗೆ ಅಕ್ಕಿ ಕೊಡದೆ ಆಡಳಿತ ಮಂಡಳಿ ಕಳ್ಳಾಟ ನಡೆಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಡ ಜನರ ನೂರಾರು ಕ್ವಿಂಟಾಲ್ ಅಕ್ಕಿಯನ್ನೆ ಮಾರಿಕೊಂಡು ನುಂಗಿ ನೀರು ಕುಡಿದಿರುವ ಆಡಳಿತ ಮಂಡಳಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಜನರಿಗೆ ಅಕ್ಕಿ ವಿತರಿಸುವುದಾಗಿ ಈಗಾಗಲೇ ಉಗ್ರಾಣದಿಂದ ಅಕ್ಕಿ ಪಡೆದಿರುವ ಸೊಸೈಟಿ ಆಡಳಿತ ಮಂಡಳಿ, ಅವರಿಗೆ ಅದನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ. 


ಇಲ್ಲಿನ 600ಕ್ಕೂ ಹೆಚ್ಚು ಕುಟುಂಬಗಳಿಗೆ ಅಕ್ಕಿ ಕೊಡದೆ ಕೇವಲ ಥಂಬ್ ಪಡೆದು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಅನ್ನಭಾಗ್ಯದ ಅಕ್ಕಿ ಸಿಗದೆ ಈ ಗ್ರಾಮದ ಬಡ ಕುಟುಂಬಗಳು ಕಂಗಾಲಾಗಿವೆ. ಸೊಸೈಟಿಯಲ್ಲಿ ಕೊಡುವ ಉಚಿತ ಅಕ್ಕಿಗಾಗಿ ಗ್ರಾಮಸ್ಥರು ನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಅಕ್ರಮ ನಡೆಸಿದವರ ವಿರುದ್ದ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.


ಇದನ್ನೂ ಓದಿ : ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಟ್ಯಾಂಕರ್ ಖರೀದಿಗೆ ಕಟ್ಟುನಿಟ್ಟಿನ ಸೂಚನೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.