ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆಗಾಗಿ ನಡೆದ ಶಾಸಕಾಂಗ ಸಭೆಯಿಂದ ಹೊರನಡೆದ ಬಳಿಕ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಯತ್ನಾಳ್, ‘ನ ದೈನ್ಯಂ, ನ ಪಲಾಯನಂ. ಯೋಧ ಎಂದಿಗೂ ದೂರಲಾರ ಅಥವಾ ವಿಷಾದ ವ್ಯಕ್ತಪಡಿಸಲಾರ. ಬದುಕೊಂದು ಮುಗಿಯದ ಸವಾಲು’ ಎಂದು ಹೇಳಿದ್ದಾರೆ. ಮುಂದುವರೆದು ‘ಯೋಧನ ಬದುಕಿನಲ್ಲಿ ಎದುರಾಗುವ ಯಾವುದೇ ಸವಾಲು ಒಳ್ಳೆಯದು ಅಥವಾ ಕೆಟ್ಟದ್ದು ಆಗಿರಲಾರದು. ಸವಾಲು ಎಂದರೆ ಅದು ಕೇವಲ ಸವಾಲು ಅಷ್ಟೇ’ ಅಂತಾ ಬರೆದುಕೊಂಡಿದ್ದಾರೆ.


MP ಪುತ್ರನ ಮೇಲೆ ವಂಚನೆ ಆರೋಪ


ಯತ್ನಾಳ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ‘ಮಂಡಾಳ್ ವಗ್ಗರಣಿ’ ಎಂಬುವರು, ‘ಯತ್ನಾಳ ಸಾಹೇಬ್ರೆ, ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಬೇಕು ಅಲ್ವಾ ... ಬಿಜೆಪಿ ಹೈ ಕಮಾಂಡ್ ನಿಮ್ಮ ಮಾತೇ ಯಾಕೆ ಕೇಳಬೇಕು ಎಂದು ವಾದಿಸುವಲ್ಲಿ ನೀವು ವಿಫಲ ಅನ್ನಿಸುತ್ತಿದೆ. ಮೋದಿ, ಅಮಿತ್ ಶಾ, ನಡ್ಡಾ ಅವರ ತೀರ್ಮಾನಕ್ಕೂ ವಿರೋಧ ಮಾಡಿದರೆ ಹೇಗೆ.. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ’ ಅಂತಾ ಸಲಹೆ ನೀಡಿದ್ದಾರೆ.


‘ಬಸನಗೌಡ್ರೆ ನಿಮ್ಮ ಹೋರಾಟ ಉತ್ತರ ಕರ್ನಾಟಕಕ್ಕೆ ಸೀಮಿತವಾಗಲಿ. ನಿಮ್ಮ ಹೋರಾಟ ವಿಜಯಪುರಕ್ಕೆ ಸಿಮೀತವಾಗಲಿ. ನಿಮ್ಮ ಹೋರಾಟ ಕ್ಷೇತ್ರದ ಅಭಿವೃದ್ಧಿಗೆ ಸೀಮಿತವಾಗಿರಲಿ. ಯಾವ ಬಿಜೆಪಿಗೆ ನಿಮ್ಮ ಬಲದ ಅರಿವಿಲ್ಲವೋ, ಆ ಬಿಜೆಪಿಗೆ ನೀವು ಅಡಿಯಾಳಾಗಿರುವುದು ಬೇಡ’ ಎಂದು Veeresh_S_D ಎಂಬುವರು ಸಲಹೆ ನೀಡಿದ್ದಾರೆ.


ಇದನ್ನೂ ಓದಿ: ಪತ್ತೆಯಾಗಿದೆ ಬೇನಾಮಿ ಬ್ಯಾಂಕ್‌ ಖಾತೆ ಸೃಷ್ಟಿಸೋ ಜಾಲ


vijayanarasimha As ಎಂಬುವರು ಟ್ವೀಟ್ ಮಾಡಿದ್ದು, ‘ನಿಮ್ಮ ಮಾತು ಮತ್ತು ನಡೆ ನಿಮಗೇ ಮುಳುವಾಗಬಾರದು.... ತಾಳ್ಮೆ ಇರಲಿ.. ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋದರೆ ಮುಂದೆ ಉಜ್ವಲ ಭವಿಷ್ಯವಿದೆ..’ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.