ಬೆಂಗಳೂರು: ಮುಂಬರುವ ಗ್ರಾಮ ಪಂಚಾಯತಿ‌ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ‘ಮಾಸ್ಟರ್ ಪ್ಲಾನ್' ರೂಪಿಸುತ್ತಿದೆ. ಎರಡು ಉಪಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಮಲ ಪಾಳಯ ಇದೀಗ ಗ್ರಾಮೀಣ ಮಟ್ಟದಲ್ಲೂ ಮಾಸ್ಟರ್ ಪ್ಲಾನ್ ರೂಪಿಸಿದೆ.


COMMERCIAL BREAK
SCROLL TO CONTINUE READING

ಗ್ರಾಮ ಪಂಚಾಯತಿ ಚುನಾವಣೆ(Election)ಯ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಎರಡು ಸಮಾವೇಶವನ್ನು ನಡೆಸುವುದು ಬಿಜೆಪಿ ಪ್ಲಾನ್ ತಯಾರಾಗಿದೆ. ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಹಾಗೂ ಮಂಡಲ ಸಮಿತಿಯ ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.


JOB: ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ


ಪಕ್ಷದ ಹಿರಿಯ ನಾಯಕರಿಗೂ ಟಾಸ್ಕ್: ಗ್ರಾಮಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಹಿರಿಯ ನಾಯಕರಿಗೂ ಟಾಸ್ಕ್ ನೀಡಲಾಗಿದೆ. ಸಚಿವರು ಹಾಗೂ ಹಿರಿಯ ನಾಯಕರನ್ನು ಒಳಗೊಂಡ 6 ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದೆ. ಡಿಸಿಎಂ ಡಾ. ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಸಂಸದೆ ಶೋಭಾ ಕರಂದ್ಲಾಜೆ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವು ಮುಖಂಡರು ಇಂತಹ ತಂಡದಲ್ಲಿ ಇದ್ದಾರೆ.


Home Guards Recruitment 2020: ಸ್ವಯಂ ಸೇವಾ ಗೃಹರಕ್ಷಕರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ


ಇವರಿಗೆಲ್ಲಾ ರಾಜ್ಯದ ವಿವಿಧ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದ್ದು ನಿಯೋಜನೆಗೊಂಡ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ನಡೆಸಲಿದ್ದಾರೆ. ಇನ್ನು ಪಂಚಾಯತಿ ಮಟ್ಟದಲ್ಲಿ 'ಕುಟುಂಬ ಮಿಲನ' ಕಾರ್ಯಕ್ರಮವೂ ನಡೆಯಲಿದೆ. ಇನ್ನು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ‘ಪಂಚರತ್ನ’ ಸಮಿತಿ ರಚನೆ ಮಾಡಲಾಗಿದೆ.


ಉಪ ಚುನಾವಣೆಯಲ್ಲಿ ಮರಾಠರನ್ನು ಓಲೈಸಲು ಬಿಜೆಪಿ ಕ್ಷುಲಕ ರಾಜಕೀಯ ಮಾಡುತ್ತಿದೆ-ಸಿದ್ಧರಾಮಯ್ಯ


ಈಗಾಗಲೇ ಸುಮಾರು 70 ಶೇಖಡಾದಷ್ಟು ಬೂತ್‌ಗಳಲ್ಲಿ ಪಂಚರತ್ನ ಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಮೂಲಕ ಗ್ರಾಮೀಣಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಈಗಾಗಲೇ ತಯಾರಿ ಆರಂಭಿಸಿದೆ.


ಮಮತಾ ಬ್ಯಾನರ್ಜಿಯನ್ನ ರಾಜಕೀಯವಾಗಿ ಮುಗಿಸುತ್ತೇವೆ: ಪ್ರಹ್ಲಾದ್​ ಜೋಶಿ