ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ, ಅವರಿಗೆ ಚುನಾವಣೆ ಮಾತ್ರ ಮುಖ್ಯ ಎಂದು ಶಾಸಕ ಯತಿಂದ್ರ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ವೆಸ್ಟ್ ಬೆಂಗಾಲ್ ನಲ್ಲಿ  ಕೊರೊನಾ ಜಾಸ್ತಿಯಾಗಿದೆ ದಯವಿಟ್ಟು ಚುನಾವಣೆ ಮುಂದೂಡಿ ಅಂತ ಎಲ್ಲರೂ ಹೇಳಿದ್ರೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ಕೇಳಲಿಲ್ಲ.ಅವಾಗ ತಮ್ಮ ರಾಜಕೀಯಕೋಸ್ಕರ ಚುನಾವಣೆ ನಡೆಸಿದ್ದರು.ಇವಾಗ ಉತ್ತರಪ್ರದೇಶದ ಸೇರಿದಂತೆ ಇಡೀ ದೇಶದಲ್ಲಿ ಒಮಿಕ್ರೋನ್ ಜಾಸ್ತಿಯಾಗುತ್ತಿದೆ.


ಇದನ್ನೂ: ದೆಹಲಿಯಲ್ಲಿ ಈಗ ಮೂರನೇ ಕೊರೊನಾ ಅಲೆ ಜಾರಿಯಲ್ಲಿದೆ- ಸತ್ಯೆಂದರ್ ಜೈನ್


ನಾರ್ಥ್ ಇಂಡಿಯಾದಲ್ಲಿ ಇನ್ನೂ ವೇಗವಾಗಿ ಹರಡುತ್ತಿದೆ, ಚುನಾವಣೆ ನಡೆಸುವುದು ಬೇಡ ಅಂತ ತಜ್ಞರು ಹೇಳಿದರೂ ಕೂಡ ಅದನ್ನು ಕೇಳಿದೆ ಚುನಾವಣೆ ರ್ಯಾಲಿಗಳನ್ನು ನಡೆಸುತ್ತಿದ್ದವರು ಬಿಜೆಪಿ ಪಕ್ಷದವರು. ಹಾಗಾಗಿ ಮೊದಲಿನಿಂದಲೂ ಕೂಡ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿಕೊಂಡು ಬಂದಿರುವುದು ಬಿಜೆಪಿ ಪಕ್ಷ ಎಂದು ಯತೀಂದ್ರ ಆರೋಪಿಸಿದರು.


'Bulli Bai' app case: ಬುಲ್ಲಿ ಬಾಯಿ ಆ್ಯಪ್ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರೆಷ್ಟು?


ಹೌದು, ನಾವು ಪಾದಯಾತ್ರೆ ಮಾಡಬೇಕು ಅಂತ ಹೇಳಿದ್ವಿ, ಏಕೆಂದರೆ ಅವಾಗ ಇನ್ನೂ ಯಾರೂ ಕೂಡ ಕೊರೊನಾ ನಿಯಮಾವಳಿಗಳನ್ನು ರೂಪಿಸಿರಲಿಲ್ಲ.ಇವಾಗ ನಿನ್ನೆ ನಿಯಮಾವಳಿಗಳನ್ನು ರೂಪಿಸಿದ್ದಾರೆ.ಅದಕ್ಕೆ ನಮ್ಮ ನಾಯಕರುಗಳು ಕುಳಿತು ಚರ್ಚೆ ಮಾಡಿ ಪಾದಯಾತ್ರೆ ಮಾಡಬೇಕಾ, ಬೇಡ್ವಾ ಅಂತ ತೀರ್ಮಾನ ಮಾಡುತ್ತಾರೆ.ಯಾವತ್ತು ಕೂಡ ಕಾಂಗ್ರೆಸ್ ಪಕ್ಷ ನಿಯಮಗಳನ್ನು ಉಲ್ಲಂಘನೆ ಮಾಡಿ ಯಾವುದೇ ಚಟುವಟಿಕೆಗಳನ್ನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ