ಬೆಂಗಳೂರು : ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬಿಜೆಪಿ ಕೈಗೊಂಡಿದ್ದ ‘ನಬಾನ್ನ ಚಲೊ ಅಭಿಯಾನ’ ಹಿಂಸಾಚಾರಕ್ಕೆ ತಿರುಗಿದ್ದು, ಇದು ಬಿಜೆಪಿಯದ್ದೇ ಕೈವಾಡ ಎಂದು ರಾಜ್ಯ ಕಾಂಗ್ರೆಸ್‌ ಆರೋಪಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಟ್ಟೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್‌, ಕೋಲ್ಕತ್ತದಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಿಜೆಪಿಗರನ್ನು ಭಯೋತ್ಪಾದಕರೆನ್ನದೆ ಬೇರೇನು ಹೇಳಬೇಕು?  ಸಂಸದ ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ ಅವರೇ ಎಲ್ಲಿ ಅಡಗಿದ್ದೀರಿ? ಬಂಗಾಳಕ್ಕೆ ಬುಲ್ಡೋಸರ್ ಕಳಿಸಿಕೊಡುವುದಿಲ್ಲವೇ? ದೇಶದಲ್ಲಿ ನಡೆಯುವ ಗಲಭೆ, ಹಿಂಸಾಚಾರಗಳ ಹಿಂದೆ ಬಿಜೆಪಿಯದ್ದೇ ಕೈವಾಡವಿರುವುದಕ್ಕೆ ಇದು ತಾಜಾ ಉದಾಹರಣೆ ಎಂದು ಹರಿಹಾಯ್ದಿದೆ.


ಇದನ್ನೂ ಓದಿ: "ಕನ್ನಡ ಕಡ್ಡಾಯ" ಕಾನೂನು ಇದೇ ಅಧಿವೇಶನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ


ಅಲ್ಲದೆ, ಪೊಲೀಸರ ಮೇಲೆ ಹಲ್ಲೆ ಮಾಡುವವರನ್ನು, ಸರ್ಕಾರಿ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಟ್ಟು ಕೊಲ್ಲಬೇಕಲ್ಲವೇ? ಈ ಮಾತನ್ನು ನಿಮ್ಮವರೇ ಹೇಳಿದ್ದಲ್ಲವೇ? ಯಾರ ನಿರ್ದೇಶನದಂತೆ ಈ ಭಯೋತ್ಪಾದನೆ ನಡೆಸುತ್ತಿರುವುದು? ನಾವು ಸಂಸ್ಕೃತಿ ರಕ್ಷಕರು, ಕಾನೂನನ್ನು ಗೌರವಿಸುವವರು ಎಂದುಕೊಳ್ಳುವ ಬಿಜೆಪಿಯ ಅಸಲಿ ಸಂಸ್ಕೃತಿ ಇದೇ ಅಲ್ಲವೇ? ಎಂದು ಕಿಡಿಕಾರಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.