ಈ ಅದ್ಬುತ ಸ್ಥಳದಲ್ಲಿ ಯೋಗಾಸನದ ಮೂಲಕ ಗಮನ ಸೆಳೆದ ಸಂಸದ ತೇಜಸ್ವಿ ಸೂರ್ಯ..!
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪರ್ವತ ಶಿಖರದ ತುತ್ತ ತುದಿಯಲ್ಲಿ ವಿವಿಧ ಯೋಗಾಸನದ ಭಂಗಿಗಳ ಮೂಲಕ ಗಮನ ಸೆಳೆದಿದ್ದಾರೆ.
ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪರ್ವತ ಶಿಖರದ ತುತ್ತ ತುದಿಯಲ್ಲಿ ವಿವಿಧ ಯೋಗಾಸನದ ಭಂಗಿಗಳ ಮೂಲಕ ಗಮನ ಸೆಳೆದಿದ್ದಾರೆ.
ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಯೋಗಾಸನದ ಹಲವು ಭಂಗಿಗಳಲ್ಲಿರುವ ಪೋಟೋಗಳನ್ನು ಶೇರ್ ಮಾಡಿಕೊಂಡಿರುವ ತೇಜಸ್ವಿ ಸೂರ್ಯ, ಪೋಟೋಗಳ ಹಿನ್ನಲೆಯಲ್ಲಿರುವ ಸ್ಪಷ್ಟ ನೀಲಿ ಆಕಾಶ, ಹಚ್ಚ ಹಸಿರಿನಿಂದ ಕೂಡಿದ ಪರ್ವತಗಳು ಮತ್ತು ಹರಿಯುವ ನದಿಗಳಿಂದಾಗಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.
"ಯೋಗ! ಬ್ರಹ್ಮಾಂಡದೊಂದಿಗಿನ ಕೂಡುವ ಏಕೈಕ ಮಾರ್ಗ" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.ಹಲವರಿಗೆ ಈ ಸ್ಥಳ ಈಗ ಅದು ಎಲ್ಲಿಯದು ಎನ್ನುವ ಕೂತುಹಲ ಮೂಡಿಸಿದೆ.ಈ ಪೋಟೋಗೆ ಪ್ರತಿಕ್ರಿಯಿಸಿರುವವರೊಬ್ಬರು 'ನಿಮ್ಮ ಚಿತ್ರಗಳಿಂದ ಬೆಳಿಗ್ಗೆ ಸಕಾರಾತ್ಮಕತೆ ಮೂಡಿದೆ ಎಂದು ಹೇಳಿದ್ದಾರೆ. 'ಅದ್ಬುತ ಸ್ಥಳ. ಇದು ಎಲ್ಲಿದೆ' ಎಂದು ಮತ್ತೊಬ್ಬರು ಕೇಳಿದ್ದಾರೆ.
ಬಿಜೆಪಿಯ ಕಿರಿಯ ಸಂಸದರಾದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದು, ರಾಜ್ಯ ಮತ್ತು ಅವರ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಯಮಿತವಾಗಿ ತಮ್ಮ ಅಭಿಪ್ರಾಯಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ತೇಜಸ್ವಿ ಸೂರ್ಯ ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್ ಅವರನ್ನು ಸೋಲಿಸಿದರು, ಮತ್ತು ಅವರು ಸಂಸತ್ತಿನಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.