ಬೆಂಗಳೂರು: ಹನುಮ ಜಯಂತಿಯಂದು ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆಗೆ ಕಾಂಗ್ರೆಸ್​ ಪಕ್ಷವೇ ರೂವಾರಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. #CONgressSupportsJihadis ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.


COMMERCIAL BREAK
SCROLL TO CONTINUE READING

‘ಹಿಜಾಬ್ ವಿವಾದ & ಹುಬ್ಬಳ್ಳಿ ಕೋಮು ಗಲಭೆಗೆ ಸಾಮ್ಯತೆ ಇದೆ ಎಂದು ಬಿಜೆಪಿ ಆರೋಪಿಸಿದೆ.  ಎರಡು ಕೂಡ ಕಾಂಗ್ರೆಸ್ ಪ್ರೇರಿತ ಮತಕ್ರೋಢೀಕರಣದ ತಂತ್ರ. ಹಿಜಾಬ್ ಪ್ರಕರಣದಲ್ಲಿ ತನ್ನ ಕಾನೂನು ಘಟಕದ ಅಧ್ಯಕ್ಷರನ್ನೇ ವಾದ ಮಾಡಲು ನಿಯೋಜಿಸಿತು. ಹುಬ್ಬಳ್ಳಿ ಗಲಭೆಯ ಮತಾಂಧ ಆರೋಪಿಗಳ ಪರವಾಗಿ ಕೆಪಿಸಿಸಿಯಿಂದಲೇ ವಕೀಲರನ್ನು ನಿಯೋಜಿಸುತ್ತೀರಾ?’ ಎಂದು ಬಿಜೆಪಿ ಪ್ರಶ್ನಿಸಿದೆ.


ವಾಣಿ ವಿಲಾಸ ಮಾದರಿಯಲ್ಲಿ ಕೆ.ಸಿ‌. ಜನರಲ್ ನಲ್ಲೂ ತಾಯಿ-ಶಿಶು ಆಸ್ಪತ್ರೆ - ಡಾ.ಸುಧಾಕರ್


‘ಕರ್ನಾಟಕದ #ಮೀರ್‌ಸಾಧಿಕ್ ಸಿದ್ದರಾಮಯ್ಯನವರೇ, ರಾಜ್ಯದಲ್ಲಿ ಈಗ ಒಂದರ ಮೇಲೊಂದರಂತೆ ನಡೆಯುತ್ತಿರುವ ಕೋಮು ಪ್ರಚೋದನಾ ಚಟುವಟಿಕೆಗಳ ಹಿಂದಿರುವುದು ನಿಮ್ಮ ಕುಚೇಷ್ಠೆಯೋ ಅಥವಾ ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ ನ ಕೈವಾಡವೋ? ಸಮಾಜದಲ್ಲಿ ಶಾಂತಿ- ಸುಭಿಕ್ಷೆ ನೆಲೆಸುವುದು ಕಾಂಗ್ರೆಸ್‌ ನಾಯಕರಿಗೆ ಬೇಕಿಲ್ಲವೇ?’ ಎಂದು ಬಿಜೆಪಿ ಕುಟುಕಿದೆ.


ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ, ಬಿಜೆಪಿ ಬೆಂಕಿಗೆ ಕಾಂಗ್ರೆಸ್ ಪೆಟ್ರೋಲ್: ಎಚ್.ಡಿ.ಕೆ


‘ಹಿಂದು ವಿರೋಧಿ #ಮೀರ್‌ಸಾದಿಕ್ ಗೆ ವಿಪಕ್ಷ ನಾಯಕನ ಪಟ್ಟ. ಕೆಪಿಸಿಸಿ ಭ್ರಷ್ಟಾಧ್ಯಕ್ಷರಿಂದ ಅಲ್ಪಮತೀಯ ಕೋಮು ಕ್ರಿಮಿಗಳಿಗೆ ಅಮಾಯಕರ ಪಟ್ಟ. ಧರ್ಮ ವಿಭಜಕನಿಗೆ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟ. ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ಹುಬ್ಬಳ್ಳಿಯಂತಹ ಹತ್ತಾರು ಘಟನೆಗೆ ಸಂಚು ರೂಪಿಸುತ್ತಿದ್ದಾರೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.