ಬೆಂಗಳೂರು: ರಾಜ್ಯದ ಜನತೆಯನ್ನು ತಮ್ಮ ಅಮಾನುಷ ಕೃತ್ಯದಿಂದ ಭಯಭೀತಗೊಳಿಸಿದ್ದ ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಕೋರರನ್ನು ರಾಜ್ಯದ ತುಘಲಕ್ ಸರ್ಕಾರ ಈಗ ತನ್ನ ಓಲೈಕೆ ರಾಜಕಾರಣದ ಸಲುವಾಗಿ ಬಿಡುಗಡೆಗೊಳಿಸಲು ಮುಂದಾಗಿದೆ‌ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆಕೋರರ ಅಮಾನುಷ ಕೃತ್ಯವನ್ನು ರಾಜ್ಯದ ಜನತೆ ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ಅಂತಹ ಮಾನವೀಯತೆಯನ್ನು ಮರೆತ ಮೃಗಗಳನ್ನು ಬಿಡುಗಡೆಗೊಳಿಸಲು ತಯಾರಾಗಿರುವ ತುಘಲಕ್ ಸರ್ಕಾರದ ಕ್ರಮವನ್ನು ಎಂದಿಗೂ ಕ್ಷಮಿಸಲಾರರು’ ಎಂದು ಟೀಕಿಸಿದೆ.


ಈ ಸರ್ಕಾರಕ್ಕೆ ಉಳಿಗಾಲವಿಲ್ಲವೆಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ: ಬಿಜೆಪಿ


‘ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಕೋರರನ್ನು, ಶಿವಮೊಗ್ಗದ ಹರ್ಷ ಹತ್ಯೆಯಲ್ಲಿ ಪಾಲ್ಗೊಂಡ ಕೊಲೆಪಾತಕರನ್ನು ಹಾಗೂ ಮಂಗಳೂರಿನ ಗಲಭೆಯಲ್ಲಿ ಪಾಲ್ಗೊಂಡವರನ್ನೂ ಬಿಡುಗಡೆ ಮಾಡಬೇಕೆಂದು ತನ್ವೀರ್‌ ಸೇಠ್‌ ಅವರು ಹೇಳಿರುವುದು ಅಸಮಂಜಸ. ಹಾಗಿದ್ದರೆ ಅವರ ಮೇಲೆ ಹಲ್ಲೆ ಮಾಡಿದವರ ಮೇಲಿನ ಕೇಸ್‌ ಅನ್ನೂ ವಾಪಸ್‌ ತೆಗೆಯಲು ಅವರಿಗೆ ಒಪ್ಪಿಗೆ ಇದೆಯೇ? ಇಂತಹ ಇಬ್ಬಗೆಯ ನೀತಿಯನ್ನು ಕಾಂಗ್ರೆಸ್ಸಿಗರು ಬಿಡಬೇಕು’ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ್ ಹೇಳಿಕೆ ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.   


‘ಈ ನೆಲದ ಕಾನೂನಿಗೆ ಕೊಂಚವೂ ಗೌರವ ನೀಡದೇ, ಪೊಲೀಸ್ ಠಾಣೆಗೆ ನುಗ್ಗಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ಹುಬ್ಬಳ್ಳಿಯ ಗೂಂಡಾಗಳ ದುಷ್ಕೃತ್ಯವನ್ನು ಕನ್ನಡಿಗರೂ ಎಂದಿಗೂ ಮರೆಯುವುದಿಲ್ಲ. ಅಂತಹವರಿಗೆ ಕ್ಷಮಾದಾನ ನೀಡಲು ಮುಂದಾಗಿರುವ ತುಘಲಕ್ ಸರ್ಕಾರದ ಕೆಟ್ಟ ಕ್ರಮವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸಲಾರರು’ ಎಂದು ಬಿಜೆಪಿ ಕುಟುಕಿದೆ.


ಡಿ.ಕೆ.ಶಿವಕುಮಾರ್ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ: ಬಿಜೆಪಿ ಟೀಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.