ಬೆಂಗಳೂರು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೂ, ಕಾಂಗ್ರೆಸ್‌ ಪಕ್ಷಕ್ಕೂ ನಂಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. #CommunalCongress ಹ್ಯಾಶ್‍ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟದ ಆರೋಪಿಯ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಕಾಲತ್ತು ಸುಮ್ಮನೆ ವಹಿಸಿಲ್ಲ. ಬಾಂಬ್‌ ಸ್ಪೋಟ ಪ್ರಕರಣಕ್ಕೂ, ಕಾಂಗ್ರೆಸ್‌ ಪಕ್ಷಕ್ಕೂ ನಂಟಿದೆ. ಬಾಂಬ್‌ ಸ್ಪೋಟದ ಆರೋಪಿಯೊಂದಿಗೆ ಬ್ಲಾಕ್‌ ಕಾಂಗ್ರೆಸ್‌ ಜವಾಬ್ದಾರಿಯಿರುವ ವ್ಯಕ್ತಿಯ ಪುತ್ರ ನೇರ ಸಂಪರ್ಕ ಹೊಂದಿದ್ದ’ ಎಂದು ಟ್ವೀಟ್ ಮಾಡಿದೆ.


ಸ್ವಾಮೀಜಿಗಳು‌24 ಗಂಟೆಗಳ‌ ಗಡುವು ನೀಡಿದ್ದು ಸರಿಯಲ್ಲ!


‘ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್ ಕಾರ್ಯದರ್ಶಿ ತಾಜುದ್ದೀನ್ ಎಂಬವನ ಪುತ್ರ ಈಗ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧ ಬಂಧಿತನಾಗಿದ್ದಾನೆ. ತಾಜುದ್ದೀನ್ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ಯುಟಿ ಖಾದರ್ ಅವರ ಅತ್ಯಾಪ್ತನಾಗಿದ್ದಾನೆ. ಮಂಗಳೂರು ಸ್ಪೋಟದ ಬಗ್ಗೆ‌ ಕಾಂಗ್ರೆಸ್‌ ಮೃದು ಧೋರಣೆ ತಳೆಯಲು ಇದೇ ಕಾರಣವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.


ಕಾಂಗ್ರೆಸ್‌ ಪದಾಧಿಕಾರಿಯನ್ನು ಹೇಗೆ ಸಂಬೋಧಿಸುತ್ತೀರಿ? ಕೆಪಿಸಿಸಿಯಲ್ಲಿ ಉಗ್ರ ಸೆಲ್‌ ತೆರೆಯುವ ಯೋಚನೆಯಿದೆಯೇ?’ ಎಂದು ಬಿಜೆಪಿ ಕುಟುಕಿದೆ.


ಕೆಪಿಸಿಸಿ ಕಚೇರಿಯಲ್ಲಿ ರಂಪಾಟ! ಕೆಜಿಎಫ್ ಬಾಬುಗೆ ಚಳಿ ಬಿಡಿಸಿದ ‘ಕೈ’ ಕಾರ್ಯಕರ್ತರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.