ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿದಿನ ತಪ್ಪದೆ ವಾಕ್ ಮಾಡುವ ವ್ಯಕ್ತಿ. ಆದರೆ ಇವತ್ತು ಮತ ಎಣಿಕೆ ಆರಂಭ ಅಗುತ್ತಿದ್ದಂತೆ ವಾಕಿಂಗ್ ಗೆ ಬ್ರೇಕ್ ಕೊಟ್ಟು ಟಿವಿ ಮುಂದೆ ಕುಳಿತಿದ್ದಾರೆ.


COMMERCIAL BREAK
SCROLL TO CONTINUE READING

ಬೆಳಗ್ಗೆಯೇ ಪತ್ರಿಕೆಗಳನ್ನು ಓದಿದ ಬಿ.ಎಸ್. ಯಡಿಯೂರಪ್ಪ(BS Yediyurappa) ನಂತರ ಎಂದಿನಂತೆ ವಾಕಿಂಗ್ ಗೆ ತೆರಳದೆ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲೇ ಟಿವಿ ನೋಡುತ್ತಾ ಕುಳಿತಿದ್ದಾರೆ. ಇಂದಿನ ಫಲಿತಾಂಶ ತಮ್ಮ ಸರ್ಕಾರದ ಭವಿಷ್ಯ ನಿರ್ಧರಿಸುವ ಹಿನ್ನೆಲೆಯಲ್ಲಿ ಮೊದಲಿಗೆ ಆತಂಕದಲ್ಲೇ ಟಿವಿ ವೀಕ್ಷಣೆ ಮಾಡಿದರು.


ಕೆಲ ಹೊತ್ತಿನ ಬಳಿಕ ಮೊದಲ ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡ ಬಳಿಕ ತುಸು ನಿರಾಳರಾದಂತೆ ಕಂಡುಬಂದ ಯಡಿಯೂರಪ್ಪ, ಉಪಹಾರ ಸೇವಿಸಿದರಲ್ಲದೆ ಕೆಲವರೊಂದಿಗೆ ದೂರವಾಣಿ ಮೂಲಕ ಚರ್ಚೆ ಮಾಡುತ್ತಿದ್ದಾರೆ. ವಿಶೇಷವಾಗಿ ಅಭ್ಯರ್ಥಿಗಳ ಜೊತೆ ಗೆಲುವಿನ ಖಾತರಿ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ‌.