ಚಾಮರಾಜನಗರ: ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಅವರ ಬಾವ ಮಹಾದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ(ಡಿ.22) ಪೊಲೀಸರಿಂದ ಸ್ಥಳ ಮಹಜರು ನಡೆಯಿತು.


COMMERCIAL BREAK
SCROLL TO CONTINUE READING

ಹನೂರು ತಾಲೂಕಿನ ರಾಮಾಪುರಕ್ಕೆ ಆರೋಪಿ ಮುರುಗೇಶ್ ಹಾಗೂ ಪ್ರಭಾಕರ್  ನನ್ನು ಕರೆತಂದ ರಾಮನಗರ ಪೊಲೀಸರು ಕಂದಕ, ಕಾರು ನಿಲ್ಲಿಸಿದ್ದ ಸ್ಥಳದಲ್ಲಿ ಮಹಜರು ನಡೆಸಿದರು. ಇನ್ನು ಮಹಜರು ವೇಳೆ ಟೀ ಶರ್ಟ್ ವೊಂದನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.


ಮಹಾದೇವಯ್ಯ ಅವರನ್ನು ಕಿಡ್ನಾಪ್ ಮಾಡಿಕೊಂಡು ರಾಮಾಪುರಕ್ಕೆ ಬಂದಿದ್ದ ಹಂತಕರು 50 ಅಡಿ ಆಳದ ಕಂದಕಕ್ಕೆ ಶವವನ್ನು ಎಸೆದಿದ್ದರು. ಬಳಿಕ ರಾಮಾಪುರದಲ್ಲಿ ಕಾರು ನಿಲ್ಲಿಸಿ ಬಸ್ ಮೂಲಕ ಹನೂರಿಗೆ ಬಂದು ನಂತರ ಚನ್ನಪಟ್ಟಣಕ್ಕೆ ಹೋಗಿದ್ದನ್ನು ಪೊಲೀಸರಿಗೆ ವಿವರಿಸಿದ್ದಾರೆ.


ಇದನ್ನೂ ಓದಿ: Terror Attack: ಸೇನಾ ವಾಹನದ ಮೇಲೆ ಉಗ್ರರ ದಾಳಿ, ಐವರು ಯೋಧರು ಹುತಾತ್ಮ


ಕಳೆದ 4ರಂದು ಕೊಲೆ ಪ್ರಕರಣ ಬೆಳಕಿಗೆ


ತೋಟದ ಮನೆಯಿಂದ ಕಾಣೆಯಾಗಿದ್ದ ಮಹಾದೇವಯ್ಯ ಅವರ ಶವ ಅರೆ ಕೊಳೆತ ಸ್ಥಿತಿಯಲ್ಲಿ ಕಳೆದ 4ರಂದು ರಾಮಾಪುರದಿಂದ 6 ಕಿಮೀ ದೂರದ ಕಂದಕದಲ್ಲಿ ಪತ್ತೆಯಾಗಿತ್ತು.


ರಾಮಾಪುರದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮಹಾದೇವಯ್ಯರ ಕಾರು ಪತ್ತೆಯಾಗಿದ್ದರಿಂದ ಪೊಲೀಸರು ಕೂಂಬಿಂಗ್ ನಡೆಸಿದ್ದರು. ಸುಮಾರು 50 ಅಡಿ‌ ಕಂದಕದಿಂದ ಹರಸಾಹಸಪಟ್ಟು ಮಾಹದೇವಯ್ಯರ ಶವವನ್ನು ಹೊರಕ್ಕೆ ತರಲಾಗಿತ್ತು.


ಆರೋಪಿಗಳು ಕಾರು ನಿಲ್ಲಿಸಿ ಹೊರ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ರಾಮನಗರ ಪೊಲೀಸರು ಈ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ. ಚಾಮರಾಜನಗರ ಪೊಲೀಸರು ತನಿಖೆಗೆ ಸಹಕಾರ ನೀಡುತ್ತಿದ್ದಾರೆ.


ಇದನ್ನೂ ಓದಿ: ಟ್ರೇನ್‌ನಲ್ಲಿ ವೃದ್ಧ ದಂಪತಿಗಳು 22,000 ರೂ. ದಂಡ: ಆದರೆ ಮಗನಿಗೆ 40000 ರೂ. ಪರಿಹಾರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.