ಬೆಂಗಳೂರು : ರಾಜ್ಯ ಜೆಡಿಎಸ್ ಘಟಕದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಮತ್ತು ನೂತನ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರನ್ನು ನೇಮಿಸಿ ಜೆಡಿಎಸ್‌ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಹೈಕೋರ್ಟ್ ನಲ್ಲೂ ಪ್ರಶ್ನೆ ಮಾಡಿ ಇದಕ್ಕೆ ತಡೆಯಾಜ್ಞೆ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಇಬ್ರಾಹಿಂ ಹೇಳಿದರು.


COMMERCIAL BREAK
SCROLL TO CONTINUE READING

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವೇಗೌಡರು ಯಾರನ್ನೂ ಬೆಳೆಯಲು ಬಿಡಲಿಲ್ಲ, ಎಲ್ಲ ನನಗೆ, ನನ್ನ ಮಕ್ಕಳಿಗೆ ಅಂತ ಇರ್ತಾರೆ. ಒಕ್ಕಲಿಗನ್ನೂ ಸಹ ಅವರು ಬೆಳೆಸಲಿಲ್ಲ, ನನ್ನ ಬದಲು ಶ್ರವಣಕುಮಾರಿಗೆ ಪರಿಷತ್ ಸದಸ್ಯ ಮಾಡಿದ್ರ, ರಾಜ್ಯಸಭೆ ಸ್ಥಾನ ಕುಪೇಂದ್ರ ರೆಡ್ಡಿಗೆ ನೀಡಿದರು. ಪರಿಷತ್ ಸ್ಥಾನ ಬಿಟ್ಟು ಬಂದ ನನಗೆ ಏನು ಕೊಟ್ರಿ, ಹುಣಸೇಬೀಜ ಕೊಟ್ರಿ ಎಂದು ದೇವೇಗೌಡರ ವಿರುದ್ಧ ಇಬ್ರಾಹೀಂ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: ಜೆಡಿಎಸ್‌ಗೆ ಹೊಸ ಸಾರಥಿ : ಪಕ್ಷದ ಅಧ್ಯಕ್ಷರಾಗಿ ಹೆಚ್.ಡಿ.ಕುಮಾರಸ್ವಾಮಿ ನೇಮಕ


ಕುಮಾರಸ್ವಾಮಿ ಜನರಿಂದ ಆಯ್ಕೆ ಆಗಿರೋರು, ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ನಿಯಮದಲ್ಲಿ ಅವಕಾಶ ಇಲ್ಲ, ರಾಷ್ಟ್ರೀಯ ಅಧ್ಯಕ್ಷ, ಘಟಕ ವಿಸರ್ಜನೆ ಮಾಡಲು ಸಾಧ್ಯವಿಲ್ಲ, ನನ್ನ ಪದಚ್ಯುತಿ ಅಲ್ಪಸಂಖ್ಯಾತ ವಿರೋಧಿ ನಡೆ ಅಲ್ಲ, ಯಾಕಂದ್ರೆ ನಾನು ಕನ್ನಡಿಗ, ಒಂದು ಜಾತಿಗೆ ಸೀಮಿತ ಆಗಿಲ್ಲ. ಕನ್ನಡದ ಜನ ನನ್ನ ಪರ ಇದ್ದಾರೆ, ಜನ ಇವರಿಗೆ ಉತ್ತರ ಕೊಡ್ತಾರೆ ಎಂದರು ಗುಡುಗಿದರು.


ಮತ್ತೆ ಕಾಂಗ್ರೆಸ್‌ಗೆ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಇನ್ನೂ ಡೈವೋರ್ಸ್ ಆಗಿಲ್ಲ, ಈಗಲೇ ಏನ್ ಹೇಳಕ್ಕಾಗುತ್ತೆ? ಕಾಂಗ್ರೆಸ್‌ಗೆ ಹೋಗ್ತೀವೋ, ಜೆಡಿಎಸ್‌ಗೇ ಬರ್ತಾರೋ ನೋಡೋಣ, ನಿತೀಶ್ ಕುಮಾರ್, ಕೇಜ್ರಿವಾಲ್ ಜತೆಗೆ ಮಾತಾಡಿದ್ದೇನೆ ಎಂದು ಇಬ್ರಾಹಿ ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.