ಬೆಳಗಾವಿ: ಕೆಪಿಎಂಇ ವಿರೋಧಿಸಿ ಮುಷ್ಕರ ನಡೆಸುತ್ತಿರುವ ವೈದ್ಯರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ವೈದ್ಯರ ಜೊತೆಗೆ ಮಾತುಕತೆ ‌ನಡೆಸುತ್ತಿರುವ ಸಿಎಂ ಕಾಯ್ದೆಯ ಬಗ್ಗೆ ವೈದ್ಯರಿಗೆ ಮನವರಿಕೆ ಮಾಡಲಿದ್ದಾರೆ. ಅಲ್ಲದೆ ವಿಧೇಯಕದಲ್ಲಿರುವ ಕೆಲ ಅಂಶಗಳನ್ನು ಬದಲಾಯಿಸುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ.


ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ರಮೇಶ್ ಕುಮಾರ್, ಡಾ. ರವೀಂದ್ರ ಮತ್ತು ತಂಡ ಮತ್ತಿತರರು ಹಾಜರಿದ್ದಾರೆ.


ಒಂದು ಕಡೆ ವೈದ್ಯರು ತಮ್ಮ ಹಠ ಬಿಡುತ್ತಿಲ್ಲ, ಮತ್ತೊಂದೆಡೆ ಸಚಿವರು ತಮ್ಮ ಪ್ರತಿಷ್ಠೆ ಬಿಡುತ್ತಿಲ್ಲ. ಇದರಿಂದಾಗಿ ಇಂದೂ ಸಹ ರಾಜ್ಯದ ವಿವಿದೆಡೆ 15 ಮಂದಿ ಪ್ರಾಣ ಬಲಿಯಾಗಿದೆ. ಹೈಕೋರ್ಟ್ ಸಹ ಆದಷ್ಟು ಬೇಗ ಈ ಮುಷ್ಕರವನ್ನು ಕೊನೆಗೊಳಿಸಲು ಸೂಚಿಸಿದೆ. ಈ ಎಲ್ಲಾ ನಿಟ್ಟಿನಲ್ಲಿ ವೈದ್ಯರ ಜೊತೆ ಸಿಎಂ ನಡೆಸುತ್ತಿರುವ ಸಭೆ ಫಲಕಾರಿಯಾಗುವುದೇ ಎಂಬುದನ್ನು ಕಾದುನೋಡಬೇಕಿದೆ.