ಬೆಂಗಳೂರು: ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು  ಭಾರಿ ಮುಖಭಂಗ ಅನುಭವಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಅಲೆ ಇದೆ ಎನ್ನುವವರಿಗೆ ಟಾಂಗ್ ನೀಡಿದ್ದಾರೆ. 



COMMERCIAL BREAK
SCROLL TO CONTINUE READING

 


ಈ ಕುರಿತಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ "ದೇಶದಲ್ಲಿ ಮೋದಿ ಅಲೆ ಇದೆ ಎನ್ನುವ ವಿಶ್ಲೇಷಕರು ಮತ್ತು ಅಥವಾ ಚಾಣಕ್ಯ ಈ ಕೆಳಗಿನ ಕೆಲವು ಸಂಗತಿಗಳನ್ನು ಗಮನಿಸಬೇಕು"


"2014 ರಿಂದ ಒಟ್ಟು 16 ಸ್ಥಾನಗಳಿಗಾಗಿ ಲೋಕಸಭಾ ಉಪಚುನಾವಣೆ ನಡೆದಿದೆ. ಅದರಲ್ಲಿ ಬಿಜೆಪಿಯು ಕೇವಲ ಎರಡರಲ್ಲಿ ಗೆದ್ದು 14 ಕ್ಷೇತ್ರಗಳಲ್ಲಿ ಸೋತಿದೆ.ಅದರಲ್ಲಿ ಬಿಜೆಪಿ ತಾನು ಹೊಂದಿದ್ದ ಆರು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಸೋಲನ್ನು ಅನುಭವಿಸಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.