Mysore Dasara: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಅಧಿ ದೇವಿ ಚಾಮುಂಡಿ ಸನ್ನಿಧಿಯಲ್ಲಿ ದಸರಾ ಉದ್ಘಾಟನೆ ಸಮಾರಂಭ ನಡೆಯಲಿದೆ. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಚಾಮುಂಡಿಗೆ ವಿಶೇಷ ಪೂಜಾ ಕಾರ್ಯವನ್ನು ಮಾಡಲಿದ್ದು, ಬೆಳಗ್ಗೆ 9:15ರಿಂದ 9:40ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯರಿಂದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. 


COMMERCIAL BREAK
SCROLL TO CONTINUE READING

ಸಿಎಂ ಸಿದ್ದರಾಮಯ್ಯ ರಿಂದ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದು, ಪುಷ್ಪಾರ್ಚನೆ ಮೂಲಕ 10 ದಿನಗಳ ದಸರಾಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ನಾಡ ದೇವಿ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಪೂಜಾ ಕೈಂಕರ್ಯ‌ ಮಾಡಲಾಗಿದ್ದು, ಇಂದು ಬ್ರಾಹ್ಮೀ ಅಲಂಕಾರದಲ್ಲಿ ತಾಯಿ ಚಾಮುಂಡಿ ಕಂಗೊಳಿಸಲಿದ್ದಾಳೆ.


ಇಂದು ದಸರಾದ ಮೊದಲನೆಯ ದಿನ ಚಾಮುಂಡಿ ಮಾತೆಗೆ ಪೂಜೆ ಸಲ್ಲಿಸಲಾಗುತ್ತಿದ್ದು ಒಂಬತ್ತು ದಿನ ಒಂಬತ್ತು ದೇವತೆಗಳಿಗೆ ವಿಶೇಷ ಪೂಜೆ ನಡೆಯಲಿದೆ, ಅದರಂತೆ ಶುಕ್ರವಾರ ಮಹೇಶ್ವರಿ, ಶನಿವಾರ ಕೌಮಾರಿ, ಸೋಮವಾರ ವಾರಾಹಿ, ಮಂಗಳವಾರ ಇಂದ್ರಾಣಿ, ಬುಧವಾರ ಸಿದ್ಧಿ ಧಾತ್ರಿ, ಗುರುವಾರ ಸರಸ್ವತಿ , ಶುಕ್ರವಾರ ಮಹಾಲಕ್ಷ್ಮಿ, ಶನಿವಾರ ಅಶ್ವಾರೋಹಣ ಅಲಂಕಾರದಲ್ಲಿ ದೇವಿ ಚಾಮುಂಡಿ ಅಲಂಕಾರಗೊಂಡು ಕಂಗೊಳಿಸಲಿದ್ದಾಳೆ. 


ಇನ್ನೂ, ಇಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್‌ಸಿ ಮಹದೇವಪ್ಪ, ಸಚಿವರು, ಶಾಸಕರು ಸೇರಿ ಗಣ್ಯರು ಭಾಗಿಯಾಗಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.