ಹಿಂದಿನಿಂದಲೂ ಜಪಾನೀಸ್ ಟೌನ್ಶಿಪ್ ನಿರ್ಮಾಣದ ಕನಸು ಇದೆ- ಡಾ.ಜಿ. ಪರಮೇಶ್ವರ್
ಜಪಾನೀಸ್ ಟೌನ್ಶಿಪ್ ನಿರ್ಮಾಣಕ್ಕೆ ಮುಂದಾದ ಸರ್ಕಾರ
ಬೆಂಗಳೂರು: ವಸಂತನರಸಾಪುರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗುತ್ತಿದ್ದು, ಇಲ್ಲಿಯೇ ಜಪಾನೀಸ್ ಟೌನ್ಶಿಪ್ ತೆರೆಯಲು ಸಹ ಮುಂದಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಜಪಾನ ದೇಶದ ಕೌನ್ಸಿಲ್ ಟಕಯುಕಿ ಕಿತಗ್ವ ವಿಧಾನಸೌಧದಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು.
ಹಿಂದಿನಿಂದಲೂ ಜಪಾನೀಸ್ ಟೌನ್ಶಿಪ್ ನಿರ್ಮಾಣದ ಕನಸು ಇದೆ. ಸಂತನರಸಾಪುರಸಲ್ಲಿ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ನಡೆಯುತ್ತಿದೆ. ಅಲ್ಲಿನ ಮೂಲಸೌಕರ್ಯ ಒದಗಿಸಿಕೊಡುವ ಸಂಬಂಧ ಇನ್ನೆರಡು ದಿನದಲ್ಲಿ ಸಭೆ ಕರೆದಿದ್ದು ಆ ಸಂದರ್ಭದಲ್ಲಿ ಸಭೆಗೆ ತಾವೂ ಬರಬಹುದು ಎಂದು ಆಹ್ವಾನಿಸಿದರು.