ವಿಜಯಪುರ: 'ಡಿಸಿಎಂ ಗೋವಿಂದ ಕಾರಜೋಳರಿಗೆ ಅದೃಷ್ಟ ಚೆನ್ನಾಗಿದೆ. ಅವರು ಸಿಎಂ ಆಗಿದ್ರೆ, ನಮ್ಮದೇನೂ ಅಭ್ಯಂತರವಿಲ್ಲ… ಅದರಲ್ಲೂ ಇದೇ ಅವಧಿಯಲ್ಲಾದರೂ ಅಭ್ಯಂತರವಿಲ್ಲ' ಎನ್ನುವ ಮೂಲಕ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರು ಕಾರಜೋಳರ ಕಾಲೆಳೆದರು.


COMMERCIAL BREAK
SCROLL TO CONTINUE READING

ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ(DCM Govind Karjol) ಗ್ರಾಮದಲ್ಲಿ ಕೆರೆಗೆ ಬಾಗಿನ ಸಮರ್ಪಣೆ ಹಾಗೂ ಸ್ಥಳೀಯ ಪ್ರಾಥಮಿಕ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶಿವಾನಂದ ಪಾಟೀಲ ಮತ್ತು ಎಂ.ಬಿ. ಪಾಟೀಲ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.


SSLC - PUC ವಿದ್ಯಾರ್ಥಿಗಳ ಗಮನಕ್ಕೆ: ಶೀಘ್ರದಲ್ಲಿ ಪ್ರಕಟವಾಗಲಿದೆ ಪರೀಕ್ಷಾ ದಿನಾಂಕ!


'ಕಾರಜೋಳ ಸಾಹೇಬ್ರೇ ನೀವೇ ಮುಖ್ಯಮಂತ್ರಿಯಾದರೂ ಅಭ್ಯಂತರವಿಲ್ಲ, ನನ್ನ ಹಾಗೂ ಎಂ.ಬಿ. ಪಾಟೀಲರಿಗಿಂತ ನಿಮಗೆ ಅದೃಷ್ಟ ಚೆನ್ನಾಗಿದೆ' ಎಂದ ಶಾಸಕ ಶಿವಾನಂದ ಪಾಟೀಲ ಹೇಳಿದರು. ಇದಕ್ಕೆ ದನಿಗೂಡಿಸಿದ ಎಂ.ಬಿ.ಪಾಟೀಲ್​, 'ಇದೇ ಅವಧಿಯಲ್ಲಾದರೂ ನಮ್ಮ ಅಭ್ಯಂತರವಿಲ್ಲ' ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಮತ್ತೆ ನಗುತ್ತಲೇ ಮಾತನಾಡಿದ ಮಾಜಿ ಸಚಿವ ಶಿವಾನಂದ ಪಾಟೀಲ್, 'ನೋಡಿ ಎಂ.ಬಿ. ಪಾಟೀಲರು ಇದೇ ಅವಧಿಯಲ್ಲಿ ಕಾರಜೋಳರು ಮುಖ್ಯಮಂತ್ರಿಯಾಗಲಿ ಎಂದು ಹೇಳುವ ಮೂಲಕ ಅವರಿಗೂ ಹಾಗೂ ಯಡಿಯೂರಪ್ಪನವರಿಗೆ ಜಗಳ ಹಚ್ಚುತ್ತಿದ್ದಾರೆ' ಎಂದು ಹಾಸ್ಯ ಚಟಾಕಿ ಹಾರಿಸಿದರು.


ಸದ್ಯಕ್ಕೆ ಶಾಲೆ ಆರಂಭ ಇಲ್ಲ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ