ಧಾರವಾಡ: ಮಾಳಮಡ್ಡಿ ನಿವಾಸಿ ಅಶ್ವೀನ್‍ಕುಮಾರ ಘಾರ್ಗಿ ಎಂಬುವವರು ಅಕ್ಯೂರಾ ಇಂಜಿನಿಯರಿಂಗ್ ಎಂಟರ್‍ಪ್ರೈಜಸ್‍ನ ಮಾಲೀಕರಾಗಿದ್ದು ಅವರು ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರಾಗಿರುತ್ತಾರೆ. ಅವರು ತಮ್ಮ ಉತ್ಪನ್ನಗಳ ತಯಾರಿಕೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ರಕ್ಷಣಾ ಪ್ಲಾಸ್ಟಿಕ್ ಕ್ಯಾಪ್‍ಗಳನ್ನು ಸ್ಲೀವ್ ಕಟಿಂಗ್ ಮಶೀನ್ ಸಹಾಯದಿಂದ ತಯಾರಿಸಲು ಯೋಜನೆಯನ್ನು ರೂಪಿಸಿದ್ದರು. ಸದರಿ ಸ್ಲೀವ್ ಕಟಿಂಗ್ ಮಶೀನ್‍ಗಾಗಿ ಇಂಟರ್‍ನೆಟ್‍ನಲ್ಲಿ ಹುಡುಕುತ್ತಿದ್ದಾಗ ಎದುರುದಾರ ಬೆಂಗಳೂರಿನ ರಾಶಿ ಅಶೋಸಿಯೆಟ್ಸ್ ಆ ಮಶೀನುಗಳನ್ನು ತಯಾರಿಸುತ್ತಿರುವುದು ತಿಳಿಯಿತು. ನಂತರ ಉಭಯತರು ಮಾತುಕತೆ ನಡೆಸಿ ರೂ.92,934/- ಕಿಮ್ಮತ್ತಿನ ಮಶೀನನ್ನು ದಿ:10/06/2022 ರಂದು ಕಳುಹಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ- "ಕಾಂಗ್ರೆಸ್‌ ಗ್ಯಾರಂಟಿಯಿಂದ ಆರ್ಥಿಕ ಬಲ; ಅಂಕಿ-ಅಂಶ ಬೇಕಿದ್ದರೆ ಕೇಳಿ ಪಡೆಯಿರಿ"


ಈ ಬಗ್ಗೆ ದೂರುದಾರ ರೂ.80 ಸಾವಿರ ಅಡವಾನ್ಸ್‍ಕೊಟ್ಟಿದ್ದರು. ನಂತರ ಎದುರುದಾರರು ವೀಡಿಯೊಕಾಲ್‍ನಲ್ಲಿ ನೀಡಿದ ಸೂಚನೆಗಳ ಮೇರೆಗೆ ದೂರುದಾರ ಸದರಿ ಮಶೀನ್ ಇನ್‍ಸ್ಟಾಲ್ ಮಾಡಲು ಪ್ರಯತ್ನಿಸಿದರು.ಆದರೆ ಆ ಮಶೀನ್ ಇನ್‍ಸ್ಟಾಲ್ ಮಾಡಿಅದನ್ನು ಚಾಲು ಮಾಡಲಾಗಲಿಲ್ಲ. ಅದರಲ್ಲಿ ನ್ಯೂನ್ಯತೆಗಳು ಕಂಡುಬಂದವು. ಅದನ್ನು ಸರಿಪಡಿಸಲು ವಿನಂತಿಸಿದರೂ ಎದುರುದಾರರು ಸರಿಪಡಿಸಲಿಲ್ಲ. ಕೊನೆಗೆ ದಿ.05/09/2022 ರಂದು ಎದುರುದುದಾರರ ವಿನಂತಿ ಮೇರೆಗೆ ದೂರುದಾರ ಸದರಿ ಮಶೀನನ್ನು ವಿ.ಆರ್.ಎಲ್ ಮೂಲಕ ಬೆಂಗಳೂರಿಗೆ ವಾಪಸ್ಸು ಕಳುಹಿಸಿದರು. ಮೂರು ತಿಂಗಳಾದರೂ ಸದರಿ ಮಶೀನ್ ರಿಪೇರಿ ಆಗದೆ ಇದ್ದಾಗ ದೂರುದಾರ ತಾನು ಆ ಮಶೀನು ಖರೀದಿಸಲು ನೀಡಿದಒಟ್ಟು ರೂ.80,000/-ಗಳನ್ನು ಶೇ.18% ಬಡ್ಡಿ ಸಮೇತ ಹಿಂದಿರುಗಿಸಲು ಎದುರುದಾರರಿಗೆ ಕೇಳಿಕೊಂಡರು. ಆದರೆ ಎದುರುದಾರ ಅವರ ಕೋರಿಕೆಯನ್ನು ಪರಿಗಣಿಸಲಿಲ್ಲ. ಹಾಗಾಗಿ ಎದುರುದಾರ ರಾಶಿ ಅಸೋಶಿಯೆಟ್ಸ್ ರವರುತನಗೆ ಮಶೀನು ರಿಪೇರಿ ಮಾಡಿಕೊಡದೇ ಅಥವಾ ಹಣವನ್ನು ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಅಂತಾದೂರಿದರು. ಅವರ ಈ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಹೇಳಿ ದೂರುದಾರ ರಾಶಿ ಅಸೋಶಿಯೆಟ್ಸ್ ವಿರುದ್ಧ ಸೂಕ್ತ ಕ್ತಮ ಕೈಗೊಳ್ಳುವಂತೆ ದಿ.09/03/2023 ರಂದು ಈ ದೂರನ್ನು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ಸಲ್ಲಿಸಿದ್ದು ಇರುತ್ತದೆ.


ಇದನ್ನೂ ಓದಿ- ರೈತರಿಗೆ ವರವಾಗದೆ ಶಾಪವಾದ ಉಗಾರ ಶುಗರ್ ಪ್ಯಾಕ್ಟರಿ


ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಕ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಶ್ರೀ.ಪ್ರಭು .ಸಿ ಹಿರೇಮಠ ದೂರುದಾರ ರಿಂದ ರೂ.80,000/- ಪಡೆದು ಅವರಿಗೆ ದೋಷಯುಕ್ತ ಸ್ಲೀವ್ ಕಟಿಂಗ್ ಮಶೀನ್ ಪೂರೈಸಿರುವುದು ಸಾಕ್ಷಾಧಾರಗಳಿಂದ ರುಜುವಾತು ಆಗಿದೆ. ಹಣ ಪಡೆದು ಎದುರದಾರರು ದೋಷರಹಿತ ಮಶೀನ್ ಮಾರಾಟ ಮಾಡುವುದು ಅವರ ಕರ್ತವ್ಯವಾಗಿದೆ. ಆದರೆ ಎದುರುದಾರರು ದೋಷಪೂರಿತ ಮಶೀನ್ ಸರಬರಾಜು ಮಾಡಿ ವ್ಯಾಪಾರದ ಅನುಚಿತ ವರ್ತನೆ ತೋರಿ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯ ಪಟ್ಟುತೀರ್ಪು ನೀಡಿರುತ್ತದೆ.


ದೂರುದಾರರಿಗೆ ತೀರ್ಪು ನೀಡಿದಒಂದು ತಿಂಗಳ ಒಳಗಾಗಿ ರೂ.80,000/- ಗಳನ್ನು ಶೇ.8% ಬಡ್ಡಿ ಸಮೇತ ಲೆಕ್ಕ ಹಾಕಿ ಕೊಡುವಂತೆ ಎದುರುದಾರ ಬೆಂಗಳೂರಿನ ರಾಶಿ ಅಸೋಸಿಯೆಟ್ಸ್‍ಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಮತ್ತು ಪ್ರಕರಣದಖರ್ಚು ವೆಚ್ಚ ಅಂತಾ ರೂ.10 ಸಾವಿರ ಎದುರುದಾರರಿಗೆ ಕೊಡಲು ಆದೇಶಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.