ಬೆಂಗಳೂರು: ಡೆಂಘೀ ಪ್ರಕರಣಗಳನ್ನ ಮುಂದಿಟ್ಟುಕೊಂಡು ಬಿಜೆಪಿ ಬೆಂಗಳೂರಿನ ಬಗ್ಗೆ ಬ್ಯಾಡ್ ಟ್ವೀಟ್ ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದು ಹೊಸದೇನಲ್ಲ. ಆದರೆ ನಾವು ಮುಂಜಾಗೃತೆ ವಹಿಸಿ ಸಾವುಗಳಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ.. 


COMMERCIAL BREAK
SCROLL TO CONTINUE READING

ಡೆಂಘೀ ನಿಯಂತ್ರಿಸಲು ಈಗಾಗಲೇ ಆರೋಗ್ಯ ಶ್ರಮವಹಿಸುತ್ತಿದೆ. ಡೆಂಘೀ ಜ್ವರದಿಂದ ಸಾವುಗಳಾಗದಂತೆ ಮುನ್ನೆಚ್ವರಿಕೆ ವಹಿಸಲು ನಾನು ಅಧಿಕಾರಿಗಳೊಂದಿಗೆ ಎರಡು ಸಭೆ ನಡೆಸಿದ್ದೇನೆ.. ಸಿಎಂ ನೇತೃತ್ವದಲ್ಲಿಯೂ ಸಭೆ ನಡೆಸಿ ಸಲಹೆ ಸೂಚನೆಗಳನ್ನ ನೀಡಲಾಗಿದೆ. 


ಸಾವುಗಳನ್ನ ತಡೆಯುವ ನಿಟ್ಟಿನಲ್ಲಿ ಡೆಂಘೀ ಅರ್ಲಿ ಡಿಟೆಕ್ಷನ್ ಗೆ ಒತ್ತು ನೀಡಲಾಗಿದ್ದು, ಟೆಸ್ಟಿಂಗ್ ಹೆಚ್ಚಿಸಲಾಗಿದೆ. ಕಳೆದ ಸಾಲಿಗೆ ಹೊಲಿಸಿದರೆ ಶೇ 40 ರಷ್ಟು ಟೆಸ್ಟಿಂಗ್ ಹೆಚ್ವಿಸಲಾಗಿದೆ. ಟೆಸ್ಟಿಂಗ್ ಹೆಚ್ಚಳ ಮಾಡಿರುವುದರ ಪರಿಣಾಮ ಡೆಂಘೀ ಪ್ರಕರಣಗಳು ಹೆಚ್ಚಾಗಿವೆ ಎಂಬುದನ್ನ ವಿಪಕ್ಷವಾಗಿ ಬಿಜೆಪಿ ಅರಿತುಕೊಳ್ಳಲಿ. ಶೇ 0.09 ರಷ್ಟು ಡೆಂಘೀ ಡೆತ್ ರೇಟ್ ಇದೆ. ಬೆಂಗಳೂರಿನಲ್ಲಿ 2 ಸಾವಿಗೀಡಾಗಿದ್ದು, ಒಬ್ಬರಿಗೆ ಕ್ಯಾನ್ಸರ್ ಇತ್ತು ಎಂದು ತಿಳಿದುಬಂದಿದೆ. 


ಇದನ್ನೂ ಓದಿ: ಜಾರಕಿಹೊಳಿ ಬ್ರದರ್ಸ್ ಮಣಿಸಲು ಲಕ್ಷ್ಮಣ ಸವದಿಗೆ ಒಲಿಯುತ್ತಾ ಕೆಪಿಸಿಸಿ ಪಟ್ಟ..!?


ಈಗಾಗಲೇ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿದೆ.. ಪ್ರತಿ ಶುಕ್ರವಾರ ಲಾರ್ವಾನಾಶಕ ದಿನವನ್ನಾಗಿ ಆಂದೋಲನದ ರೀತಿಯಲ್ಲಿ ಕ್ರಮ ಕೈಗೊಂಡಿದ್ದೇವೆ. ಹೀಗಿದ್ದಾಗಲು ಡೆಂಘೀ ಯಲ್ಲಿ ಬಿಜೆಪಿ ರಾಜಕಾರಣ ಬೆರಸುವುದು ಸರಿಯಲ್ಲ. 


ಯಾವ ಸರ್ಕಾರ ಅಸ್ಥಿತ್ವದಲ್ಲಿದೆ ಎಂದು ನೋಡಿ ಡೆಂಘೀ ಉಲ್ಬಣಗೊಳ್ಳುತ್ತದೆಯೇ ಎಂದು ಪ್ರಶ್ನಿಸಿರುವ ಸಚಿವರು, ಮೋದಿ ಸರ್ಕಾರ ದೇಶದಲ್ಲಿ ಕೋವಿಡ್ ಹಬ್ಬಿಸಿತು ಎಂದು ಆಪಾದಿಸಿದರೆ ಹೇಗಿರುತ್ತದೆ ಎಂದು ತಿರುಗೇಟು ನೀಡಿದ್ದಾರೆ. 
ಕಾಯಿಲೆ ಹರಡುವುದನ್ನು ಈ ರೀತಿ ವ್ಯಾಖ್ಯಾನಿಸುವುದು, ಸಚಿವರಿಗೆ ಡೆಂಘೀ ಬರಲಿ ಎಂದು ಬಿಜೆಪಿ ಬಯಸುವುದು ಆ ಪಕ್ಷದ ಮನಃಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.. 


ಆರೋಗ್ಯ ಇಲಾಖೆ ಈ ಹಿಂದೆ ಎಷ್ಟು ಅನಾರೋಗ್ಯವಾಗಿತ್ತು ಈಗ ಎಷ್ಟರ ಮಟ್ಟಿಗೆ ನಾವು ಸುಧಾರಣೆ ತಂದಿದ್ದೇವೆ ಎಂದು ಚರ್ಚಿಸಲು ನಾನು ಸಿದ್ಧನಿದ್ದೇನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಷ್ಕ್ರೀಯವಾಗಿದ್ದ ಔಷಧಿ ಸರಬರಾಜು ನಿಗಮವನ್ನ ನಮ್ಮ ಸರ್ಕಾರ ಸುಧಾರಣೆಯತ್ತ ತರುವ ಪ್ರಯತ್ನವನ್ನ ಸತತವಾಗಿ ಮಾಡುತ್ತಿದೆ.


ಇದನ್ನೂ ಓದಿ: ಜಾತಿಗಳನ್ನು ಒಡೆಯುತ್ತಿರುವ ಸಿಎಂ ಸಿದ್ದರಾಮಯ್ಯ, ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ : ಆರ್‌.ಅಶೋಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.