ಬೆಂಗಳೂರು : ಕಾಂಗ್ರೆಸ್ ನೀಡಿರುವ ಐದು ಭರವಸೆಗಳನ್ನು ಈಡೇರಿಸಲು ಸರ್ಕಾರ ಸಂಪೂರ್ಣ ಬದ್ಧ ಎಂದು ರಾಜ್ಯದ ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಕುಟುಂಬದ ಪ್ರತಿ ಮಹಿಳೆಗೆ 2,000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ಒಂದು ತಿಂಗಳೊಳಗೆ ಜಾರಿಗೆ ತರುವುದಾಗಿಯೂ ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ಅವರು ಈ ಮಾಹಿತಿ ನೀಡಿದ್ದಾರೆ. ಒಕ್ಕಲಿಗ ಸಮುದಾಯ ಅಸಮಾಧಾನಗೊಂಡಿರುವ ಬಗ್ಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಸ್ಥಾನ ಮಾನಹಂಚಿಕೆ ಮಾಡುವಾಗ ಅತ್ಯಂತ ಕಾಳಜಿ ವಹಿಸಬೇಕಾಗುತ್ತದೆ. ಒಮ್ಮೊಮ್ಮೆ ನಾವು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಇದು ತೀರ ಸಹಜ ಎಂದು ಹೇಳಿದ್ದಾರೆ.  


ಇದನ್ನೂ ಓದಿ : ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಬಿಸಿ ನೀರು ಎರಚಿದ ಮಹಿಳೆ..!


ಏನೇ ಆಗಲಿ ಏನೇ ಹೋಗಲಿ ನಾವು  ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ ಎನ್ನುವುದನ್ನು ಡಿಕೆಶಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಜೂನ್ 1ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಸುಮಾರು 20,000 ಕೋಟಿಯಿಂದ 26,000 ಕೋಟಿ ರೂ.ಗೆ ವ್ಯವಸ್ಥೆ ಮಾಡಿದರೆ ಏನೂ ಸಮಸ್ಯೆಯಾಗುವುದಿಲ್ಲ. ಉಳಿದ 30,000 ಕೋಟಿ ರೂ.ಗಳನ್ನು ವ್ಯವಸ್ಥೆ ಮಾಡಲು ಯೋಜನೆಗಳನ್ನು ರೂಪಿಸುತ್ತೇವೆ. ನಾವು ಏನು ಭರವಸೆ ನೀಡಿದ್ದರೂ, ಅದನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದಿದ್ದಾರೆ. 'ಗೃಹ ಲಕ್ಷ್ಮಿ' ಯೋಜನೆ ಅನುಷ್ಠಾನದ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇವೆ. ಜೂನ್ ಮೊದಲ ವಾರದಲ್ಲಿ ಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದಾರೆ. 


ಇನ್ನು ಈ ಯೋಜನೆಯ ಲಾಭ ಪತ್ನಿ ಅಥವಾ ತಾಯಿಯಲ್ಲಿ ಯಾರಿಗೆ ನೀಡಬೇಕು ಎನ್ನುವುದನ್ನು ಕುಟುಂಬ ನಿರ್ಧರಿಸಬೇಕು. ಯಾರ ಖಾತೆಗೆ ಹಣ ವರ್ಗಾವಣೆ ಆಗಬೇಕು ಆ ಬ್ಯಾಂಕ್ ಖಾತೆಯ ವಿವರವನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 


ಇದನ್ನೂ ಓದಿ : ಐದು ಗ್ಯಾರಂಟಿ ಕುರಿತು ಶೀಘ್ರದಲ್ಲೇ ಸಿಹಿ ಸುದ್ದಿ: ಸಚಿವ ಸಂತೋಷ ಲಾಡ್


ಈ ಯೋಜನೆ ಇನ್ನು ಒಂದು ತಿಂಗಳಲ್ಲಿ ಜಾರಿಗೊಳಿಸುವುದಾಗಿ ಅವರು ಹೇಳಿದ್ದಾರೆ. ಕೆಲವರು ಹಣ ಪಡೆಯಲು ಇಷ್ಟವಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅದು ಅವರ ಇಷ್ಟ. ಸರ್ಕಾರ ಭರವಸೆ ನೀಡಿದೆ. ಭರವಸೆ ಈಡೇರಿಸುತ್ತದೆ. ಅವರಿಗೆ ಬೇಕಾಗಿದ್ದರೆ ತೆಗೆದುಕೊಳ್ಳಲಿ. ಇಲ್ಲವಾದರೆ ಅವರ ಇಚ್ಛೆ ಎಂದಿದ್ದಾರೆ. ಆದರೆ ನಾವು ಯಾರನ್ನೂ ನಿರ್ಬಂಧಿಸುವುದಿಲ್ಲ ಎಂದಿದ್ದಾರೆ ಉಪಮುಖ್ಯಮಂತ್ರಿ. ಆಶ್ವಾಸನೆಯನ್ನು ಈಡೇರಿಸದಿರುವುದು ಬಿಜೆಪಿಯ ಸೋಲಿಗೆ ಪ್ರಾಥಮಿಕ ಕಾರಣ ಎಂದು  ಅವರು ಹೇಳಿದ್ದಾರೆ. 


ತಮಗೆ ನೀಡಿರುವ ಸ್ಥಾನದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಕೆಪೀಸ್ ಅಧ್ಯಕ್ಷ ಡಿಕೆ ಶಿವಕುಮಾರ್, “ನಾನು ಸಂತೋಷವಾಗಿದ್ದೇನೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಉತ್ತಮ ಆಡಳಿತದೊಂದಿಗೆ ಸರ್ಕಾರವನ್ನು ನೀಡಿದಾಗ, ನಮ್ಮ ಭರವಸೆಗಳನ್ನು ಈಡೇರಿಸಿದಾಗ, ಜನರ ಆಶೋತ್ತರಗಳನ್ನು ಈಡೇರಿಸಿದಾಗ ನನಗೆ ಸಂತೋಷವಾಗುತ್ತದೆ. ವೈಯಕ್ತಿಕ  ವಿಚಾರಗಳು ಕಣ್ಮರೆಯಾಗುತ್ತವೆ. ಕರ್ನಾಟಕದ ಜನತೆ ನಮ್ಮಲ್ಲಿ ಮೂಡಿಸಿರುವ ವಿಶ್ವಾಸ ಬಹಳ ಮುಖ್ಯ. ನಾವು  ಅದನ್ನು ಉಳಿಸಿಕೊಳ್ಳಬೇಕು. ಎಲ್ಲಾ ಭರವಸೆಗಳನ್ನು ಪೂರೈಸಿದಾಗ ನಾನು ಹೆಚ್ಚು ಸಂತೋಷವಾಗಿರುತ್ತೇನೆ ಎಂದು ಹೇಳಿದ್ದಾರೆ. ಅಧಿಕಾರ ಹಚಿಕೆ ಬಗ್ಗೆ ಹೈ ಕಮಾಂಡ್ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ನಡೆದ ಮಾತುಕತೆ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದ್ದಾರೆ.


ಇದನ್ನೂ ಓದಿ : ಗ್ರಾ.ಪಂಚಾಯತ್ ಗ್ರಂಥಾಲಯಗಳಿಗೆ 3 ಸಾವಿರ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದ ಚನ್ನವೀರ ಕಣವಿ ಕುಟುಂಬ


ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸುತ್ತದೆಯೇ ಎಂಬ ಪ್ರಶ್ನೆಗೆ, ಉತ್ತರಿಸಿದ ಡಿಕೆಶಿ, ನೈತಿಕ ಪೊಲೀಸ್‌ಗಿರಿ ಮೂಲಕ ಯಾರಾದರೂ ಶಾಂತಿ ಕದಡಲು ಪ್ರಯತ್ನಿಸಿದರೆ, ದೇಶದ ಕಾನೂನಿನಡಿಯಲ್ಲಿ ಅದಕ್ಕೆ ಅವಕಾಶವಿಲ್ಲ. ಇಲ್ಲಿ ಸಂವಿಧಾನವಿದೆ. ನಾವು ಸಂವಿಧಾನವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ. ಕರ್ನಾಟಕಕ್ಕೆ ಮತ್ತೆ ಗೋಮಾಂಸ ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿವಾದಕ್ಕೆ ಸಿಲುಕಲು ಬಯಸುವುದಿಲ್ಲ. ಏನಿದ್ದರೂ ನಮ್ಮ ಭರವಸೆಗಳು, ಅಭಿವೃದ್ಧಿಯತ್ತ ಗಮನ ಹರಿಸೋಣ  ಎಂದು ಹೇಳಿದ್ದಾರೆ. 


ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಸರಕಾರ, ಉತ್ತಮ ಆಡಳಿತ ನೀಡುವ ಸರಕಾರವನ್ನು ನೀಡುವುದು ನಮ್ಮ ದೃಷ್ಟಿ. ಬೆಂಗಳೂರಿಗೆ ಮೊದಲ ಆದ್ಯತೆ. ಬೆಂಗಳೂರಿಗೆ ಸರಿಯಾದ ಗಮನ ನೀಡಿದರೆ, ಹಣ ಬರುತ್ತದೆ ಮತ್ತು ಅದೇ ಹಣವನ್ನು ಗ್ರಾಮೀಣ ಪ್ರದೇಶಗಳಿಗೆ ವರ್ಗಾಯಿಸಬಹುದು. ಹಿಂದಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ. 


ಇದನ್ನೂ ಓದಿ : ಸಚಿವರಾದ ಬಳಿಕ ಶಿವರಾಜ ತಂಗಡಗಿ ತವರು ಜಿಲ್ಲೆಗೆ ಮೊದಲ ಭೇಟಿ: ಹಾರದ ಬದಲು ಪುಸ್ತಕದಿಂದ ಸ್ವಾಗತ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ