ಕರ್ನಾಟಕ ಸರ್ಕಾರ ರಾಜ್ಯದ ಜನತೆಗೆ ಉಚಿತ ಕೊಡುಗೆಗಳನ್ನು ನೀಡುವ ಭರವಸೆ ನೀಡಿದೆ. ಒಂದು ವೇಳೆ ಕರ್ನಾಟಕ ಸರ್ಕಾರ ಇದರ ಕುರಿತು ದೂರಾಲೋಚನೆ ನಡೆಸದೆ, ಉಚಿತ ಕೊಡುಗೆಗಳನ್ನು ನೀಡುವುದನ್ನು ದೀರ್ಘಾವಧಿಗೆ ಮುಂದುವರಿಸಿದರೆ, ಕರ್ನಾಟಕದ ಪರಿಸ್ಥಿತಿಯೂ ದಕ್ಷಿಣ ಅಮೆರಿಕಾ ಖಂಡದ ಉತ್ತರ ತೀರದಲ್ಲಿರುವ, 3 ಕೋಟಿ ಜನಸಂಖ್ಯೆಯುಳ್ಳ ವೆನಿಜುವೆಲಾದ ಸ್ಥಿತಿ ಕರ್ನಾಟಕಕ್ಕೂ ಬರಬಹುದೇ?


COMMERCIAL BREAK
SCROLL TO CONTINUE READING

ವೆನಿಜುವೆಲಾ ಒಂದು ಕಾಲದಲ್ಲಿ ಗಟ್ಟಿಯಾದ ಆರ್ಥಿಕತೆಯನ್ನು ಹೊಂದಿ, ಶ್ರೀಮಂತ ರಾಷ್ಟ್ರ ಎನಿಸಿಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವೆನಿಜುವೆಲಾ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿದೆ. ಈ ಸಂಕಷ್ಟಕ್ಕೆ ಭ್ರಷ್ಟಾಚಾರ, ಅಸಮರ್ಪಕ ನಿರ್ವಹಣೆ, ಹಾಗೂ ತೈಲ ದರದ ಕುಸಿತ ಸೇರಿದಂತೆ ಹಲವಾರು ಕಾರಣಗಳಿವೆ.


ವೆನಿಜುವೆಲಾದ ಆರ್ಥಿಕ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿನ ಸರ್ಕಾರದ ಉದಾತ್ತ ಕಲ್ಯಾಣ ಕಾರ್ಯಕ್ರಮಗಳು. ಈ ಯೋಜನೆಗಳನ್ನು ಬಡ ಮತ್ತು ಕಾರ್ಮಿಕ ವರ್ಗದವರಿಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಜಾರಿಗೆ ತರಲಾಗಿತ್ತು. ಆದರೆ ಅವುಗಳು ಸರ್ಕಾರಕ್ಕೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದವು. ನೈಜವಾಗಿ ಹೇಳುವುದಾದರೆ, ಈಗಲೂ ಸರ್ಕಾರ ಕಲ್ಯಾಣ ಕಾರ್ಯಕ್ರಮಗಳಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಒಟ್ಟು ವೆಚ್ಚಕ್ಕಿಂತ ಹೆಚ್ಚು ಖರ್ಚು ಮಾಡುತ್ತದೆ.


ಇದನ್ನೂ ಓದಿ- ಕರ್ನಾಟಕದಲ್ಲಿ ಜಯಭೇರಿ ಬೆನ್ನಲ್ಲೇ 'ಪಂಚ ರಾಜ್ಯಗಳ' ಮೇಲೆ ಕಾಂಗ್ರೆಸ್ ಕಣ್ಣು!


ಸರ್ಕಾರದ ಇಂತಹ ಜನೋಪಕಾರಿ ಯೋಜನೆಗಳಿಗೆ ತೈಲದ ಆದಾಯದ ಹಣವನ್ನು ವೆಚ್ಚ ಮಾಡಲಾಗುತ್ತಿತ್ತು. ಆದರೆ ತೈಲ ಬೆಲೆಗಳು ಕುಸಿಯುತ್ತಿದ್ದ ಹಾಗೆಯೇ ಸರ್ಕಾರ ಈ ಕಾರ್ಯಕ್ರಮಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತು. ಇದನ್ನು ವಿರೋಧಿಸಿ ರಾಷ್ಟ್ರಾದ್ಯಂತ ಪ್ರತಿಭಟನೆಗಳು ನಡೆದವು.


ವೆನಿಜುವೆಲಾದ ಆರ್ಥಿಕ ಕುಸಿತ ದೇಶದ ಮೇಲೆ ವಿನಾಶಕಾರಿ ಪರಿಣಾಮ ಬೀರಿತು. ಮಿಲಿಯನ್‌ಗಟ್ಟಲೆ ಜನರು ನಿರುದ್ಯೋಗಿಗಳಾಗಿ, ಮನೆ ಕಳೆದುಕೊಂಡರು. ಹಣದುಬ್ಬರ ಆಗಸಕ್ಕೇರಿತು. ಆಹಾರ ಮತ್ತು ಔಷಧಗಳ ಪೂರೈಕೆಯೂ ಕೊರತೆ ಅನುಭವಿಸಿತು.


ಕರ್ನಾಟಕದಲ್ಲಿನ ಪರಿಸ್ಥಿತಿ ವೆನಿಜುವೆಲಾದ ಸ್ಥಿತಿಯಂತೆ ಶೋಚನೀಯವಾಗಿಲ್ಲ. ಆದರೂ, ಕರ್ನಾಟಕ ಮತ್ತು ವೆನಿಜುವೆಲಾ ಮಧ್ಯೆ ಒಂದಷ್ಟು ಹೋಲಿಕೆಗಳು ಕಂಡುಬರುತ್ತಿವೆ. ಕರ್ನಾಟಕದಲ್ಲಿ ಸಾಕಷ್ಟು ಜನರು ಮಧ್ಯಮ ವರ್ಗಕ್ಕಿಂತಲೂ ಕೆಳಗಿರುವುದರಿಂದ ಕರ್ನಾಟಕವೂ ಅತ್ಯಂತ ಶ್ರೀಮಂತ ರಾಜ್ಯವೇನೂ ಆಗಿಲ್ಲ. ಸರ್ಕಾರಗಳೂ ಸಹ ರಾಜ್ಯದಲ್ಲಿ ಉದಾತ್ತವಾಗಿ ಯೋಜನೆಗಳನ್ನು ಘೋಷಿಸುತ್ತಾ ಬಂದಿದೆ.


ಇದನ್ನೂ ಓದಿ- Indira Canteens: ಶೀಘ್ರವೇ ಇಂದಿರಾ ಕ್ಯಾಂಟೀನ್ಗಳಲ್ಲಿ ಅತ್ಯುತ್ತಮ ಆಹಾರ- ಕಾಂಗ್ರೆಸ್


ಒಂದು ವೇಳೆ ಕರ್ನಾಟಕ ಸರ್ಕಾರ ಏನಾದರೂ ದೂರಗಾಮಿ ಪರಿಣಾಮಗಳನ್ನು ಗಮನಿಸದೆ ಇದೇ ರೀತಿ ಸಾರ್ವಜನಿಕರಿಗೆ ಉಚಿತ ಯೋಜನೆಗಳನ್ನು ಒದಗಿಸುತ್ತಾ ಬಂದರೆ, ಕರ್ನಾಟಕ ರಾಜ್ಯವೂ ವೆನಿಜುವೆಲಾದ ರೀತಿಯಲ್ಲಿ ಆರ್ಥಿಕ ಕುಸಿತವನ್ನು ಅನುಭವಿಸಬೇಕಾಗಿ ಬರಬಹುದು.


ಸಾರ್ವಜನಿಕರಿಗೆ ದೀರ್ಘಕಾಲ ಉಚಿತ ಕೊಡುಗೆಗಳನ್ನು ನೀಡುವುದರ ಒಂದಷ್ಟು ಪರಿಣಾಮಗಳು ಇಲ್ಲಿವೆ:
* ಹೆಚ್ಚಾಗುವ ಸರ್ಕಾರಿ ಸಾಲ: 

ಉಚಿತ ಕೊಡುಗೆಗಳು ಸಾಕಷ್ಟು ವೆಚ್ಚದಾಯಕವಾಗಿದ್ದು, ಅವುಗಳನ್ನು ಪೂರೈಸಲು ಸರ್ಕಾರ ಸಾಲ ಮಾಡಬೇಕಾಗುತ್ತದೆ. ಇದು ಸರ್ಕಾರಿ ಸಾಲವನ್ನು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಇದರಿಂದಾಗಿ ಪ್ರಮುಖ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರಕ್ಕೆ ಆರ್ಥಿಕ ಕೊರತೆ ಕಂಡುಬರುತ್ತದೆ.


* ಆರ್ಥಿಕ ಪ್ರಗತಿ ಕುಂಠಿತ: 
ಉಚಿತ ಯೋಜನೆಗಳು ಆರ್ಥಿಕತೆಯನ್ನು ವಿರೂಪಗೊಳಿಸಿ, ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತವೆ.


* ಹೆಚ್ಚಿನ ಅಸಮಾನತೆ: 
ಉಚಿತ ಯೋಜನೆಗಳು ಬಡವರ ಅಭಿವೃದ್ಧಿಗಾಗಿ ಯೋಜಿಸಲಾಗಿದ್ದರೂ, ಅವುಗಳು ಶ್ರೀಮಂತರಿಗೂ ಲಭ್ಯವಾಗುತ್ತವೆ. ಇದರಿಂದ ಅಸಮಾನತೆ ಇನ್ನಷ್ಟು ಹೆಚ್ಚಾಗುತ್ತದೆ.


* ರಾಜಕೀಯ ಅಸ್ಥಿರತೆ: 
ಉಚಿತ ಯೋಜನೆಗಳನ್ನು ಮತ ಖರೀದಿಸಲು ಅಸ್ತ್ರವಾಗಿ ಬಳಸಬಹುದು. ಇದರಿಂದಾಗಿ ರಾಜಕೀಯ ಅಸ್ಥಿರತೆ ತಲೆದೋರುತ್ತದೆ.


ಇದನ್ನೂ ಓದಿ- ಸಿಲಿಕಾನ್ ಸಿಟಿಯಲ್ಲಿ ಇಂದು ಕೂಡ ಮಳೆ ಸಾಧ್ಯತೆ: ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ


ಕರ್ನಾಟಕ ಸರ್ಕಾರ ದೀರ್ಘಕಾಲದ ತನಕ ಉಚಿತ ಯೋಜನೆಗಳನ್ನು ನೀಡುವುದರಿಂದ ಎದುರಾಗಬಹುದಾದ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಉಚಿತ ಕೊಡುಗೆಗಳು ಸಣ್ಣ ಅವಧಿಯಲ್ಲಿ ಮತಗಳಿಸಲು ಸುಲಭ ಅಸ್ತ್ರವೆಂಬಂತೆ ಕಂಡುಬರಬಹುದು. ಆದರೆ ಅವುಗಳು ದೀರ್ಘಾವಧಿಯಲ್ಲಿ ಗಂಭೀರ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.