ಬೆಂಗಳೂರು: ಬೀಚ್‌ನಲ್ಲಿ ಆಟವಾಡುವಾಗ ಅರೆಬರೆ ಬಟ್ಟೆ ಧರಿಸಿ ಅಸಭ್ಯವಾಗಿ ವರ್ತಿಸುವವರಿಗೆ ವಸ್ತ್ರ ಸಂಹಿತೆ ಶಾಕ್ ನೀಡಲು ರಾಜ್ಯ ಮಹಿಳಾ ಆಯೋಗ ಮುಂದಾಗಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ, ಬೀಚ್ನಲ್ಲಿ ಅರೆಬರೆ ಬಟ್ಟೆ ಧರಿಸಿ ಪುರುಷರು ಓಡಾಡುತ್ತಿದ್ದಾರೆ. ಕೆಲವರು ಬೆತ್ತಲಾಗಿ ತಿರುಗಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಮಹಿಳಾ ಪ್ರವಾಸಿಗರಿಗೆ ಮುಜುಗರ ಉಂಟಾಗುತ್ತಿದೆ. ಹಾಗಾಗಿ ಬೀಚ್‌ನಲ್ಲಿ ಆಟ ಆಡುವವರಿಗೆ ವಸ್ತ್ರ ಸಂಹಿತೆ ಜಾರಿಗೆ ತನ್ನಿ ಎಂದು ಒತ್ತಾಯಿಸಿದ್ದಾರೆ.


ಇತ್ತೀಚೆಗೆ ತಾವು ಗೋಕರ್ಣ ಬೀಚ್ ಗೆ ತೆರಳಿದ್ದಾಗ ಅಲ್ಲಿ ಕೆಲ ಪುರುಷರು ನಗ್ನವಾಗಿ ಸುತ್ತಾಡುತ್ತಿರುವುದನ್ನು ತಾವು ಕಂಡಿದ್ದಾಗಿಯೂ ಪತ್ರದಲ್ಲಿ ಪ್ರಸ್ತಾಪಿಸಿರುವ ಅವರು, ಬೀಚ್ ನಲ್ಲಿ ಪುರುಷರು ಶಾರ್ಟ್ಸ್ ಗಳನ್ನು ಧರಿಸಿದರೆ ತಪ್ಪಿಲ್ಲ. ಆದರೆ ನಗ್ನವಾಗಿ ಸುತ್ತಾಡುವುದು ನಿಜಕ್ಕೂ ಅಸಹ್ಯ. ಹಾಗಾಗಿ ವಸ್ತ್ರ ಸಂಹಿತೆ ಜಾರಿ ಮಾಡಲೇಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಪತ್ರ ಮುಖೇನ ಒತ್ತಾಯಿಸಿದ್ದಾರೆ.