ಬೆಂಗಳೂರು: ಮಾದಕ ವಸ್ತು ಸೇವಿಸಿದ ಪ್ರಕರಣದಲ್ಲಿ ದಿವಂಗತ ಆದಿಕೇಶವಲು‌ ಮಗ ಶ್ರೀನಿವಾಸ್ ನನ್ನ ಬಂಧಿಸಿದ್ದ‌ NCB ಅಧಿಕಾರಿಗಳು ವಿಚಾರಣೆ ಮುಕ್ತಾಯದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಶ್ರೀನಿವಾಸನನ್ನು 14 ದಿನಗಳ‌ ಕಾಲ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.


COMMERCIAL BREAK
SCROLL TO CONTINUE READING

ಮೇ‌ 23ರಂದು ಹೈದರಾಬಾದ್ ನಿಂದ ಏರ್ ಪೋರ್ಟ್ ಬಳಿ ಬರುವಾಗ ಡ್ರಗ್ಸ್ ಸರಬರಾಜು ಮಾಡಿಕೊಂಡ ಆರೋಪದಡಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಶ್ರೀನಿವಾಸ್ ನನ್ನು ಬಂಧಿಸಲಾಗಿತ್ತು. ಇದೀಗ ವಿಚಾರಣೆ‌‌ ಮುಕ್ತಾಯ ಬಳಿಕ ಆರೋಪಿಯನ್ನ ಜೈಲಿಗಟ್ಟಲಾಗಿದೆ.


ಇದನ್ನೂ ಓದಿ: ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ನಡು ರಸ್ತೆಯಲ್ಲಿಯೇ ಎರಡು‌ ಬಣಗಳ ನಡುವೆ ಕಾದಾಟ


ಟಿವಿಎಸ್ ಸೂಟ್ಕರ್ ನಲ್ಲಿ‌ ಡ್ರಗ್ಸ್ ಸಪ್ಲೈ


ಹೈದರಾಬಾದ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶ್ರೀನಿವಾಸ್ ಸಾದಹಳ್ಳಿ ಗೇಟ್ ನ‌ ಮೆಕ್ ಡೊನಾಲ್ಡ್ ಬಳಿ ಕಾರಿನಲ್ಲಿ ಬರುವಾಗ ಟಿವಿಎಸ್ ಸ್ಕೂಟರ್ ನಲ್ಲಿ ಬಂದಿದ್ದ ಗಿರೀಶ್  ಶ್ರೀನಿವಾಸ್ ಗೆ ಒಂದು ಗ್ರಾಂ ಕೊಕೈನ್ ತಂದುಕೊಟ್ಟಿದ್ದ. ಡ್ರಗ್ಸ್ ಪ್ಯಾಕೆಟ್ ನೀಡುತ್ತಿದ್ದಂತೆ ಸುತ್ತುವರೆದ ಎನ್ ಸಿಬಿ ಅಧಿಕಾರಿಗಳು ಶ್ರೀನಿವಾಸನನ್ನು ವಶಕ್ಕೆ ಪಡೆದುಕೊಂಡಿದ್ದರು.


ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ MES ಪುಂಡರ ಕಿರಿಕ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.