ಹಾಸನ: ನಮ್ಮೆಲ್ಲರ ಪ್ರೀತಿಯ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನಿಧನರಾದ ಸುದ್ದಿಯನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಳ್ಳದಂತಾಗಿದೆ,ಇಂತಹ ಸಂದರ್ಭದಲ್ಲಿ ಶಬರಿಮಲೆಗೆ ಹೋಗಿದ್ದ ಯುವಕರ ತಂಡವೊಂದು ಈಗ ನೆಚ್ಚಿನ ನಟನಿಗೆ ಅಯ್ಯಪ್ಪಸ್ವಾಮೀ ದೇವರ ದರ್ಶನವನ್ನು ಮಾಡಿಸುವ ಮೂಲಕ ಸ್ಮರಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:"ರಾಷ್ಟ್ರೀಯವಾದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಈ ದೇಶ ಮುಂದುವರೆಸಿದೆ": ವಿಚಾರಣೆ ಬಳಿಕ ಕಂಗನಾ ಪೋಸ್ಟ್


ಇಲ್ಲಿನ ಅರಕಲಗೂಡು ತಾಲೂಕಿನ ಕಳ್ಳಿಮುದ್ದನಹಳ್ಳಿ ಗ್ರಾಮದ ಯುವಕರು ಅಪ್ಪುವಿಗೆ ದರ್ಶನ ಮಾಡಿಸಿದ್ದಾರೆ.ಇವರು ಪ್ರತಿವರ್ಷ ಕಾಲ್ನಡಿಗೆಯಲ್ಲಿ ಶಬರಿಮಲೆಗೆ ಹೋಗಿ ಪೂಜೆ ಸಲ್ಲಿಸುತ್ತಾರೆ.ಅದೇ ರೀತಿ ಈ ವರ್ಷವೂ ಕೂಡ ಅವರು ಶಬರಿ ಮಲೆಗೆ ಹೋಗಿ ಪೂಜೆಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.


ಪುನೀತ್ ರಾಜಕುಮಾರ್ ಅವರು ನಿಧನರಾಗಿದ್ದಾಗ ಗ್ರಾಮದಲ್ಲಿ ಈ ಯುವಕರ ತಂಡವು ಶ್ರದ್ದಾಂಜಲಿಯನ್ನು ಅರ್ಪಿಸಿತ್ತು,ಈಗ ಅದೇ ಯುವಕರು ತಮ್ಮ ಶಬರಿಮಲೆ ಯಾತ್ರೆಯಲ್ಲಿ ನೆಚ್ಚಿನ ನಟ ಫೋಟೋದೊಂದಿಗೆ ದರ್ಶನವನ್ನು ಪಡೆದಿದ್ದಾರೆ.


ಇದನ್ನೂ ಓದಿ: Viral Photo: ಸಾರ್ವಜನಿಕವಾಗಿ ಕಪಿಲ್ ದೇವ್‌ಗೆ ಮುತ್ತಿಟ್ಟ ರಣವೀರ್ ಸಿಂಗ್, 'Awkward kiss' ಫೋಟೋ ವೈರಲ್.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.