Bommai : ಅವರು ಇಂದು ರಾಣಡಬೆನ್ನೂರಿನ ಆರ್ ಟಿ ಇ ಎಸ್ ಕಾಲೇಜು ಹೆಲಿಪ್ಯಾಡ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಚಿತ್ರನಟ ಪ್ರಕಾಶ್ ರಾಜ್ ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರ ಇದೆ ಎಂದು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆತಂಕವಾದಿಗಳಿಗೆ ನಾವು ಆತಂಕವಾದಿಗಳು ಎಂದು ಈಗಾಗಲೇ ಮೋದಿ ಹೇಳಿದ್ದಾರೆ. ಭಯೋತ್ಪಾದಕರಿಗೆ ಆತಂಕವಾದಿಗಳಿಗೆ ಈ ನೆಲದ ಮೇಲೆ ಅವಕಾಶ ಇಲ್ಲ. ಭಯೋತ್ಪಾದಕ ಕೃತ್ಯ ಮಾಡಿದವರಿಗೆ ಭಯೋತ್ಪಾದಕ ಅನ್ನುತ್ತಾರೆ ಎಂದರು.


COMMERCIAL BREAK
SCROLL TO CONTINUE READING

ಇದನ್ನು ಓದಿ : Aditi Rao Hydari : ಗ್ಲಾಮರ್‌ಸ್ ಲುಕ್ ನಲ್ಲಿ ಅದಿತಿ, ಮೋಡಿಮಾಡುವ ಫೋಟೋಸ್ ಇಲ್ಲಿವೆ


 ಪ್ರಕಾಶ್ ರಾಜ್ ಒಳ್ಳೆಯ ನಟ ಅವರು ಈಗಾಗಲೇ ವಿವಾದಾತ್ಮಕ ಮಾತನಾಡಿದ್ದಾರೆ. ವಿವಾದಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ಪ್ರಸ್ತುತ ಇರಬೇಕು ಅಂತ ತೀರ್ಮಾನ ಮಾಡಿದಂತಿದೆ ಎಂದು ಪ್ರಕಾಶ್ ರಾಜ್ ಗೆ ತಿರುಗೇಟು ನೀಡಿದರು.


ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರದಲ್ಲಿ ಬಿಜೆಪಿ ನಾಯಕರ ಮೌನ ವಹಿಸಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತನಿಖೆಯಲ್ಲಿ ಎನ್ ಐ ಎ ಬಂದರೂ ಕೂಡಾ ನಾವು ಒಪ್ಪಿಕೊಳ್ಳುತ್ತೆವೆ. ಪ್ರಜ್ವಲ್ ರೇವಣ್ಣಗೆ ಒಂದೇ ದಿನದಲ್ಲಿ ವೀಸಾ ಹೇಗೆ ಸಿಕ್ಕಿತು ಎಂಬ ಶಾಸಕ ವಿನಯ್ ಕುಲಕರ್ಣಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ,  ವೀಸಾ ಹೇಗೆ ಸಿಕ್ಕಿತು ಅಂತ ಕೇಳಿದರೆ ಹೇಗೆ? ಅದು ಒಂದೇ ದಿನದಲ್ಲಿ ಸಿಗುತ್ತದೆ. 


ಇದನ್ನು ಓದಿ : Chanakya Niti: ಹೆಣ್ಣನ್ನು ಖುಷಿಪಡಿಸಲು ಒಂಟೆಯ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಮೊದಲ ಪ್ರಯತ್ನದಲ್ಲೇ ಫುಲ್ ರಿಸಲ್ಟ್ ಗ್ಯಾರಂಟಿ!


ಅವರು ವೀಸಾಗೆ ಅರ್ಜಿ ಹಾಕಿದ್ದು ಅವರಿಗೆ  ಸಿಕ್ಕಿದ್ದು ಇವರು ನೋಡಿದಾರಾ? ಅವರು ಯಾವಾಗ ವೀಸಾಗೆ ಹಾಕಿದ್ದರು ಎನ್ನುವುದು ಇವರಿಗೆ ಗೊತ್ತಾ? ವೀಸಾ ಜರ್ಮನಿ ಸರ್ಕಾರ ಕೊಡುತ್ತದೆ. ವೀಸಾ ಕೊಡುವವರು ಕೇಂದ್ರ ಸರ್ಕಾರದವರಲ್ಲ.ಕಾಮನ್ ಸೆನ್ಸ್ ಇರಬೇಕು ಅಷ್ಟು ಗೊತ್ತಿಲ್ಲವಾ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಇದೇ ವೇಳೆ ಇಂಥ ಘಟನೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು, ಗಂಭಿರವಾಗಿ ಆಗಿ ಕ್ರಮ ತೆಗೆದುಕೊಳ್ಳಬೇಕು, ಇಲ್ಲಿ ಅಮಾಯಕರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.