ಬೆಂಗಳೂರು: ತೆರಿಗೆಯನ್ನು ವಂಚನೆ ಮಾಡಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಒಟ್ಟು ನಾಲ್ಕು ಕೇಸ್ ಗಳನ್ನು ದಾಖಲಿಸಿತ್ತು. ಈಗ ಶನಿವಾರದಂದು ಈ ಪ್ರಕರಣದ ವಿಚಾರಣೆಗಾಗಿ ಆರ್ಥಿಕ ಅಪರಾಧಗಳ ಕೋರ್ಟ್ಗೆ ಹಾಜರಾಗಿದ್ದ ಅವರಿಗೆ ಮೂರು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ.


COMMERCIAL BREAK
SCROLL TO CONTINUE READING

ಮೂರು ಪ್ರಕರಣಗಳಲ್ಲಿ ಡಿ.ಕೆ ಶಿವಕುಮಾರ್ ಜೊತೆ ಇದ್ದ ಉಳಿದವರಿಗೂ ಕೂಡ ಜಾಮೀನು ಸಿಕ್ಕಿದೆ ಎಂದು ತಿಳಿದು ಬಂದಿದೆ.ಅರ್ಜಿ ವಿಚಾರಣೆ ನಡೆಸಿದ ಆರ್ಥಿಕ ಅಪರಾಧ ಪ್ರಕರಣಗಳ ಕೋರ್ಟ್ ನಾಲ್ಕನೇ ಪ್ರಕರಣದಲ್ಲೂ ಡಿಕೆಶಿ ಜೊತೆಗೆ ಇದ್ದ  ಆರೋಪಿಗಳಿಗೆ ಜಾಮೀನು ದೊರಕಿದೆ ಎಂದು ಹೇಳಲಾಗಿದೆ.


ತೆರಿಗೆ ವಂಚನೆ ಪ್ರಕರಣದ ವಿಚಾರವಾಗಿ ವಿಚಾರಣೆ ಇದ್ದ ಹಿನ್ನಲೆಯಲ್ಲಿ ಶನಿವಾರದಂದು  ಡಿಕೆಶಿ, ಸಚಿನ್ ನಾರಾಯಣ್  ಹಾಗೂ  ಮತ್ತಿತರು ಸಹಿತ  ಕೋರ್ಟ್ ಗೆ ಹಾಜರಾಗಿದ್ದರು.ಈಗ  ಜಾಮೀನು ಸಿಕ್ಕಿರುವುದರಿಂದ ಸಚಿವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.