ಬೆಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಮುಂದುವರಿಯಲಿದೆ, ಇನ್ನೂ ಐದು ದಿನ ಈ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಪ್ರಸಾದ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿದ ವಿಜ್ಞಾನಿ ಪ್ರಸಾದ್, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲಿಯೂ ಐದು ದಿನ ಹಗುರ ಮಳೆ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : 'ರಾಜ್ಯದಲ್ಲಿವೆ 231 ಡ್ಯಾಂಗಳು, ಆದ್ರೂ, 10 ಲಕ್ಷ ಹೆಕ್ಟೇರ್ ಗೆ ನೀರಾವರಿ ಇಲ್ಲ'


ನೈರುತ್ಯ ಮುಂಗಾರು ಚುರುಕಾಗಿದೆ, 3 ಕಡೆ 20 ಸೆಂ.ಮೀ ಗೂ ಅಧಿಕ ಮಳೆಯಾಗಲಿದೆ. ಶಿರಾದಲ್ಲಿ 23 ಸೆಂ.ಮೀ, ಮುಲ್ಕಿ 22, ಕಾರವಾರ 21 ಸೆಂ.ಮೀ ಮಳೆಯಾಗಿತ್ತು. ವಾತಾವರಣದಲ್ಲಿ ಗುಜರಾತ್ ನಿಂದ ಕರ್ನಾಟಕ ಕರಾವಳಿಯವರೆಗೆ ದಟ್ಟ ಮೋಡ ಇದೆ. ದಕ್ಷಿಣ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಇದೆ. ಹೀಗಾಗಿ ಮುಂದಿನ ಐದು ದಿನ ಕರಾವಳಿ, ದ.ಒಳನಾಡಿಗೆ ಅತ್ಯಂತ ಭಾರೀ ಮಳೆ ಸಾಧ್ಯತೆ ಎಂದು ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ