ಬಿಜೆಪಿಯ ಪರಿವರ್ತನ ಯಾತ್ರೆಗೆ ಐದು ವಿಶೇಷ ವಾಹನಗಳು ಸಿದ್ಧವಾಗಿದ್ದು, ಇಂದು ಮಾದಾವರ ನೈಸ್ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಲನೆ ನೀಡಲಿದ್ದಾರೆ.


COMMERCIAL BREAK
SCROLL TO CONTINUE READING

ಪರಿವರ್ತನಾ ವಾಹನಗಳ ವಿಶೇಷತೆ:


1) ಈ ಪರಿವರ್ತನಾ ಯಾತ್ರೆಯಲ್ಲಿ ಭಾಷಣಕ್ಕಾಗಿಯೇ ಒಂದು ಬೃಹತ್ ವಾಹನ ಸಿದ್ದವಾಗಿದೆ. ಹತ್ತರಿಂದ-ಹದಿನೈದು ಪ್ರಮುಖ ನಾಯಕರು ಜೊತೆಗೆ 50 ಮಂದಿ ದ್ವಿತೀಯ ಹಂತದ ನಾಯಕರು ನಿಲ್ಲಲು ಇರುವ ವಾಹನ ಸಿದ್ಧವಾಗಿದೆ. ವಾಹನದಲ್ಲಿ ಭಾಷಣಕ್ಕೆ ಮೈಕ್ ಮತ್ತು ಲೈಟ್ ವ್ಯವಸ್ಥೆ ಮಾಡಲಾಗಿದೆ.


2) ಜನಸಂಪರ್ಕ ಅಭಿಯಾನ ಯಾತ್ರೆಗೆ ಬಳಸಿದ್ದ ವಾಹನ ಸಹ ಈ ಯಾತ್ರೆಯಲ್ಲಿ ಬಳಕೆಗೊಳ್ಳಲಿದೆ.


3) ರೈತ ಚೈತನ್ಯ ಯಾತ್ರೆಗೆ ಬಳಸಿದ್ದ ವಿಶೇಷ ವಾಹನ ನೂತನ ಟಚ್ ನೊಂದಿಗೆ ಬಳಕೆಗೊಳ್ಳಲಿದೆ.


4) ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರವಾಸ ಮಾಡಲಿರುವ ವಾಹನ ಆಕರ್ಷಣೆಯ  ಪ್ರಮುಖ ಕೇಂದ್ರಬಿಂದು. ಆ ಬೃಹತ್ ವಾಹನದಲ್ಲಿ ಊಟದ ಹಾಲ್, ಅಡುಗೆ ಮನೆ, ಮಲಗುವ ಕೋಣೆ, ನೀರು ಹಾಗೂ ಶೌಚಾಲಯದ ವ್ಯವಸ್ಥೆ. ತುರ್ತು ಸಭೆ ನಡೆಸಲು ಕೂಡ ವಿಶೇಷ ವಾಹನದಲ್ಲಿ ವ್ಯವಸ್ಥೆ ಮಾಡಲಾಗಿದೆ.


5) ಇದರ ಜೊತೆಗೆ ಬಿಜೆಪಿ ಸೋಷಿಯಲ್ ಮೀಡಿಯಾ, ಧ್ವನಿವರ್ಧಕಗಳಿಗಾಗಿಯೇ ಪ್ರತ್ಯೇಕ ವಾಹನ ವ್ಯವಸ್ಥೆ