ನವದೆಹಲಿ: ಮಾಜಿ ಸಿಎಂ ವೀರಪ್ಪ ಮೊಯಿಲಿಗೆ 2020 ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.


COMMERCIAL BREAK
SCROLL TO CONTINUE READING

ಇವರ ಜೊತೆಗೆ ಸಾಹಿತಿ ಕೆ.ಎಸ್. ಮಹಾದೇವಸ್ವಾಮಿ (ಸ್ವಾಮಿ ಪೊನ್ನಾಚಿ) ಮತ್ತು ಹೆಚ್‌‌.ಎಸ್‌. ಬಾಯಕೋಡ್‌ ಅವರು ಕೂಡ ಪ್ರಶಸ್ತಿ  ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.ಮಾಜಿ ಸಿಎಂ ವೀರಪ್ಪ ಮೊಯಿಲಿ (Veerappa Moily) ಅವರ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ' ಎನ್ನುವ ಕೃತಿಗೆ 2020 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.ಮುಖ್ಯ ತೀರ್ಪುಗಾರರಾಗಿ ಇದ್ದ ಸಾಹಿತಿ ಅರವಿಂದ ಮಾಲಗತ್ತಿ, ಪದ್ಮಪ್ರಸಾದ್ ಹಾಗೂ ಎಸ್ ಜಿ ಸಿದ್ದರಾಮಯ್ಯ ನವರ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.


ಇದನ್ನೂ ಓದಿ:ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ: ವೀರಪ್ಪ ಮೊಯ್ಲಿ


ಇನ್ನೊಂದೆಡೆಗೆ ಕೆ.ಎಸ್. ಮಹಾದೇವಸ್ವಾಮಿ( ಸ್ವಾಮಿ ಪೊನ್ನಾಚಿ) ಅವರು ರಚಿಸಿರುವ ‘ದೂಪದ ಮಕ್ಕಳು ಎನುವ ಸಾಹಿತ್ಯ ಕೃತಿಗೆ ಸಣ್ಣ ಕತೆಗಳ ಕೃತಿಗೆ 2020 ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ್‌ ಲಭಿಸಿದೆ.ಡಾ.ಕುಂ.ವೀರಭದ್ರಪ್ಪ, ಡಾ.ಎಚ್‌.ಎಲ್‌. ಪುಷ್ಪಾ, ಡಾ.ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರನ್ನು ಒಳಗೊಂಡ ತೀರ್ಪುಗಾರರ ಮಂಡಳಿ ಆಯ್ಕೆ ಮಾಡಿದೆ. ಇನ್ನು ಬಾಲ ಸಾಹಿತ್ಯ ಪುರಸ್ಕಾರಕ್ಕೆ  ಎಚ್‌.ಎಸ್‌. ಬಾಯಕೋಡ್ ಅವರ 'ನಾನೋ ಅಂಬೇಡ್ಕರ್‌' ಕಾದಂಬರಿ ಆಯ್ಕೆಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ