ಬೆಂಗಳೂರು: ಗದಗ ಬಸ್ ನಿಲ್ದಾಣಕ್ಕೆ ಗಾನಯೋಗಿ ಪಂ.ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.


COMMERCIAL BREAK
SCROLL TO CONTINUE READING

ಈಗ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮುಖಂಡರಾದ ಎಚ್.ಕೆ ಪಾಟೀಲ್ ಅವರು ಸ್ವಾಗತಿಸಿದ್ದಾರೆ.'ಕಣ್ಣಿಲ್ಲದವರ ಬದುಕಿಗೆ ಕಣ್ಣಾದ ಗಾನಯೋಗಿ ಪಂಡಿತ ಕವಿ ಪುಟ್ಟರಾಜ ಗವಾಯಿಗಳ ಹೆಸರನ್ನು ನವೀಕರಣಗೊಂಡಿರುವ ಗದಗ ಹಳೇ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಲು ಮುಖ್ಯಮಂತ್ರಿಗಳು ಒಪ್ಪಿರುವುದು ಹಾಗೂ ಉಪ ಮುಖ್ಯ ಮಂತ್ರಿಗಳಾದ ಶ್ರೀ ಲಕ್ಷ್ಮಣ ಸವದಿಯವರು ಅನುಮೋದಿಸಿರುವುದು ಸಂತೋಷದ ವಿಷಯ.


ಕಣ್ಣಿಲ್ಲದವರ ಬದುಕಿಗೆ ಕಣ್ಣಾದ ಗಾನಯೋಗಿ ಪಂಡಿತ ಕವಿ ಪುಟ್ಟರಾಜ ಗವಾಯಿಗಳ ಹೆಸರನ್ನು ನವೀಕರಣಗೊಂಡಿರುವ ಗದಗ ಹಳೇ ಬಸ್ ನಿಲ್ದಾಣಕ್ಕೆ ನಾಮಕರಣ...

Posted by H.K.Patil on Tuesday, 24 November 2020

ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿ ಅನುಮೋದಿಸಿದ ನಿರ್ಣಯ ಸ್ವಾಗತಾರ್ಹವಾದದ್ದು' ಎಂದು ಅವರು ಬರೆದುಕೊಂಡಿದ್ದಾರೆ.