ಬೆಂಗಳೂರು: ರಾಜಧಾನಿಯಲ್ಲಿ ಪಿಓಪಿ ಗಣಪತಿ ಪರ ಉತ್ಸವ ಸಮಿತಿ ಬ್ಯಾಟಿಂಗ್ ಮಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ನಿಷೇಧಿತ ಪಿಓಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಆಗ್ರಹಿಸಿದೆ. 


ಪಿಓಪಿ ಗಣಪತಿ ಕೇವಲ ಪೂಜೆಗೆ ಮಾತ್ರ ಸಿಮೀತ ಮಾಡಬೇಕು.ನೀರಿನಲ್ಲಿ 10ದಿನ ಇದ್ರೆ ಮಾತ್ರ ಮಾರಕವಾಗುತ್ತದೆ. ವಿಸರ್ಜನೆ ಆದ ತಕ್ಷಣವೇ ನೀರಿನಿಂದ ತೆರವು ಮಾಡಿದರೆ ಪರಿಸರಕ್ಕೆ ಮಾರಕವಿಲ್ಲ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಸಮಜಾಯಿಷಿ ನೀಡಿದರು. 


ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ


ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರದಿಂದಲೇ ಮೂರ್ತಿ ತಯಾರಕರಿಗೆ ಮಣ್ಣು, ಬಣ್ಣ ನೀಡುವ ಕೆಲಸ ಆಗಲಿ ಎಂದು ಪ್ರಕಾಶ್ ರಾಜು ಮನವಿ ಮಾಡಿದರು. 


ಸಮಿತಿ ಬೇಡಿಕೆಗಳೇನು..?


- ಗಣೇಶೋತ್ಸವದ ಕುರಿತು ಸರ್ಕಾರದ ನಿರ್ಧಾರ 60 ದಿನ ಮುಂಚೆ ತಿಳಿಸಬೇಕು


- ಮೂರ್ತಿ ತಯಾರಕರು, ಮಾರಾಟಗಾರರಿಗೆ ಯಾವುದೇ ತೊಂದರೆ ನೀಡಬಾರದು


- ಗಣೇಶ ಮೂರ್ತಿಯ ಎತ್ತರಕ್ಕೆ ಯಾವುದೇ ನಿರ್ಬಂಧ ಹೇರಬಾರದು


- ಗಣೇಶ ಮೂರ್ತಿ ವಿಸರ್ಜನೆಗೆ ತಾತ್ಕಾಲಿಕ ಹೊಂಡಗಳನ್ನ ನಿರ್ಮಿಸಬೇಕು


- ಇದಕ್ಕಂತಲೇ ಆನ್ ಲೈನ್ ವ್ಯವಸ್ಥೆ ರೂಪಿಸಬೇಕು


- ಆಚರಣಾ ಸಮಿತಿಗಳಿಗೆ ಕನಿಷ್ಠ 5 ವರ್ಷಗಳ ಪರವಾನಗಿ ನೀಡಬೇಕು


- ಉತ್ಸವ ಸಮಿತಿಗಳಿಗೆ ಪೊಲೀಸರ ಕಿರುಕುಳ, ಕೇಸ್ ದಾಖಲು ಆಗದಂತೆ ನೋಡಿಕೊಳ್ಳಬೇಕು


- ಮೆರವಣಿಗೆ ಸಮಯದಲ್ಲಿ ಮಾರ್ಗ ಮದ್ಯ ಯಾವುದೇ ಅಡೆ ತಡೆ ಇರಬಾರದು


- ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆಗೆ ಯಾವುದೇ ಸಮಯ ನಿಗದಿ ಮಾಡಬಾರದು