ಹುಬ್ಬಳ್ಳಿ : ಯಡಿಯೂರಪ್ಪಗೆ (B S Yadiyurappa) ಅಧಿಕಾರ ಮೋಹವಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು 78 ವರ್ಷದ ಯಡಿಯೂರಪ್ಪಗೆ ಅಧಿಕಾರ ಮೋಹವಿರಬೇಕಾದರೆ, 77 ವರ್ಷದ ನನಗೆ ಅಧಿಕಾರ ಮೋಹವಿದ್ದರೆ ತಪ್ಪಾ ? ಎಂದು ಪ್ರಶ್ನಿಸಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ಕೆಂಡಾಮಂಡಲವಾಗಿರುವ ವಿಶ್ವನಾಥ್, ಈಗ ದಿನಕ್ಕೊಂದರಂತೆ ಯಡಿಯೂರಪ್ಪ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಪುಸ್ತಕ ಬರೆಯುತ್ತಿರುವ ‘ಹಳ್ಳಿ ಹಕ್ಕಿ’
ಮೂರು ದಿನಗಳ ಬೆಳವಣಿಗೆ ಹೇಸಿಗೆ ತಂದಿದೆ. ರಾಜಕೀಯ ಬಿಟ್ಟು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ. ರಾಜ್ಯ ಸರ್ಕಾರದ ಬದಲಾವಣೆ ಬಗ್ಗೆ ಪುಸ್ತಕ ಬರೆಯುತ್ತಿದ್ದೇನೆ. ಈಗಾಗಲೇ 8 ಅಧ್ಯಾಯಗಳು ಮುಗಿದಿವೆ. ಪುಸ್ತಕ ಬೇಗ ಮಾರುಕಟ್ಟೆಗೆ (Market) ಬರಲಿದ್ದು, ಅದರಲ್ಲಿ ಸರ್ಕಾರ ಬದಲಾವಣೆಯ ನಿಗೂಢ ರಹಸ್ಯಗಳು ಇರಲಿವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : JDS: ಮಹತ್ವದ ಬದಲಾವಣೆಯತ್ತ ಜೆಡಿಎಸ್: ಹೊಸ ಕೋರ್ ಕಮಿಟಿ ರಚನೆಗೆ 'ಜೆಡಿಎಸ್' ನಿರ್ಧಾರ!


‘ಸಚಿವ ಯೋಗೇಶ್ವರ್ ಜೈಲಿಗೆ ಹೋಗುತ್ತಾರೆ.”
ಸಚಿವ ಯೋಗೇಶ್ವರ್ (C P Yogeshwar) ವಿರುದ್ಧ ಮೆಗಾಸಿಟಿ ಹಗರಣ (megacity scam) ದಲ್ಲಿ 9371 ಕೇಸ್ ಗಳಿವೆ. ಸದ್ಯ ಪ್ರಕರಣಕ್ಕೆ ಸ್ಟೇ ಸಿಕ್ಕಿದೆ. ಸ್ಟೇ ತೆರವುಗೊಂಡಾಕ್ಷಣ ಯೋಗೇಶ್ವರ್ ಬಂಧನವಾಗುತ್ತದೆ. ಜೈಲಿಗೆ ಹೋಗಲಿರುವ ವ್ಯಕ್ತಿಗೆ ಮಂತ್ರಿ ಪದವಿ ನೀಡಬೇಕಾ ಎಂದು ವಿಶ್ವನಾಥ್ ಪ್ರಶ್ನಿಸಿದರು. 


‘ಯಡಿಯೂರಪ್ಪ ನಾಯಕತ್ವದ ಪ್ರಶ್ನೆ ಮಾಡಲ್ಲ’
ಜ. 16ರಂದು ಅಮಿತ್ ಶಾ (Amit Shah) ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರ ಭೇಟಿಗೆ ಅವಕಾಶ ಕೇಳಿದ್ದೇನೆ. ಅವರ ಜೊತೆ ರಾಜಕೀಯ ವಿಚಾರ ಚರ್ಚೆ ಮಾಡುತ್ತೇನೆ. ಯಡಿಯೂರಪ್ಪ ನಾಯಕತ್ವವನ್ನು ನಾನು ಪ್ರಶ್ನಿಸಲ್ಲ, ಅವರ ನಡವಳಿಕೆಯನ್ನು ಪ್ರಶ್ನಿಸುತ್ತಿದ್ದೇನೆ ಎಂದು ಹೇಳಿದರು.


ಇದನ್ನೂ ಓದಿ : D.K.Shivakumar: 'ಏಳು ಜನ್ಮ ಎತ್ತಿದರೂ ಕರ್ನಾಟಕ ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲಾಗುವುದಿಲ್ಲ’


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.