ಚಾಮರಾಜನಗರ: ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸುವ ಘಟನೆಗಳ ನಡುವೆ ಕಳೆದ 13 ವರ್ಷಗಳಿಂದ ಶಾಲಾ ಶೌಚಾಲಯವನ್ನು ಮುಖ್ಯ ಶಿಕ್ಷಕರೊಬ್ಬರು ಶುಚಿ ಮಾಡುವ ಅಪರೂಪದ, ಮಾದರಿ ಕಾರ್ಯ ಗಡಿಜಿಲ್ಲೆಯ ಶಾಲೆಯೊಂದರಲ್ಲಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಹೌದು..., ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಹಾದೇಶ್ವರಸ್ವಾಮಿ ಎಂಬವರು ಶಾಲಾ ಶೌಚಾಲಯವನ್ನು ಸ್ವತಃ ಶುಚಿ ಮಾಡಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಪಾಠ ಮಾಡುತ್ತಿದ್ದಾರೆ.


ಮಹಾತ್ಮಾ ಗಾಂಧಿ, ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಶಾಲೆಯ ಮುಖ್ಯ ಶಿಕ್ಷಕರಾದ ಮಹಾದೇಶ್ವರಸ್ವಾಮಿ ಸ್ವಚ್ಛತೆಯೇ ದೈವತ್ವ ಎಂದು ನಂಬಿದ್ದು ಶೌಚಾಲಯಗಳನ್ನು ಶುಚಿಯಾಗಿಟ್ಟಿಕೊಳ್ಳಿ ಎನ್ನುವ ನಾವೇ ಶುಚಿ ಮಾಡಿದರೇ ವಿದ್ಯಾರ್ಥಿಗಳು ಅದನ್ನು ಕಲಿತುಕೊಂಡು ಮನೆಯಲ್ಲಿ ಪಾಲನೆ ಮಾಡುತ್ತಾರೆ ಎಂದು ತಾವೇ ಶೌಚಾಲಯಗಳನ್ನು ಕ್ಲೀನ್ ಮಾಡುತ್ತಾರೆ.


ಇದನ್ನೂ ಓದಿ- ರಾಜ್ಯದಲ್ಲಿ ಶತಕ ದಾಟಿದ ಮಹಾಮಾರಿ ಕೊರೊನಾ ಪ್ರಕರಣ


ಶಾಲೆಯಲ್ಲಿ ಬಾಲಕಿಯರಿಗೆ ಎರಡು, ಬಾಲಕರಿಗೆ ಎರಡು ಹಾಗೂ ಶಿಕ್ಷಕರಿಗೆ 1 ಶೌಚಾಲಯವಿದ್ದು 5 ಶೌಚಾಲಯಗಳನ್ನು ವಾರಕ್ಕೊಮ್ಮೆ ವಿದ್ಯಾರ್ಥಿಗಳನ್ನು ಕರೆದು ಅವರ ಮುಂದೆ ಶುಚಿಗೊಳಿಸುತ್ತಾರೆ.


ತಮ್ಮ ಹಣದಲ್ಲಿ ಫೆನಾಯಿಲ್, ಸೋಪ್ ತಂದಿಡುವ ಮಹಾದೇಶ್ವರಸ್ವಾಮಿ ಶಾಲೆಯ ಪ್ರತಿ ತರಗತಿಯಲ್ಲಿ ಕನ್ನಡಿ, ಬಾಚಣಿಗೆ, ಪೌಡರ್, ವಿಭೂತಿ, ಕುಂಕುಮವನ್ನೂ ತಂದಿಟ್ಟಿದ್ದಾರೆ. 


ಇದನ್ನೂ ಓದಿ- ರಾಜಕೀಯ ಚಟುವಟಿಕೆಗಳಲ್ಲಿ ದಿವ್ಯಾಂಗರಿಗೆ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಗೌರವ: ಭಾರತೀಯ ಚುನಾವಣಾ ಆಯೋಗದಿಂದ ವಿಶೇಷ ಮಾರ್ಗಸೂಚಿ


ಕಳೆದ 2010 ರಲ್ಲಿ ಗಾಂಧಿ ಜಯಂತಿ ದಿನದಿಂದ ನಾನು ಈ ಕಾರ್ಯ ಆರಂಭ ಮಾಡಿದ್ದು ಅಂದಿನಿಂದಲೂ ಇದನ್ನು ಮುಂದುವರೆಸಿಕೊಂಡು ಹೋಗಿದ್ದೇನೆ. ಶಿಕ್ಷಕರನ್ನು ನೋಡಿಯೇ ಮಕ್ಕಳು ಕಲಿಯಲಿದ್ದು ನಾವೇ ಕ್ಲೀನ್ ಮಾಡಿದಾಗ ಮಕ್ಕಳಿಗೂ ಕೂಡ ಶುಚಿ ಪ್ರಜ್ಞೆ ಮೂಡಲಿದೆ, ಮನೆಯಲ್ಲೂ ಮುಂದೆ ಅವರ ಜೀವನದಲ್ಲೂ ಅದನ್ನು ಪಾಲನೆ ಮಾಡುತ್ತಾರೆ ಎನ್ನುತ್ತಾರೆ ಮಹಾದೇಶ್ವರಸ್ವಾಮಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.