Karnataka Kerala Border Roads Flooded: ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದೆ. ವರುಣನ ಅಬ್ಬರದಿಂದಾಗಿ ಕರ್ನಾಟಕ- ಕೇರಳ ಗಡಿಯಲ್ಲಿ ರಸ್ತೆಗಳು ಜಲಾವೃತವಾಗಿದ್ದು  ಬತ್ತೇರಿ, ವೈನಾಡಿಗೆ ತೆರಳಲು ಹರಸಾಹಸ ಪಡಬೇಕಿದೆ.


COMMERCIAL BREAK
SCROLL TO CONTINUE READING

ಬಂಡೀಪುರಕ್ಕೆ (Bandipura) ಹೊಂದಿಕೊಂಡಿರುವ ಕೇರಳ ರಸ್ತೆಗಳು ಮಳೆಗೆ ಜಲಾವೃತವಾಗಿದ್ದು   ಲಾರಿ, ಟ್ರಕ್ ಹೊರತುಪಡಿಸಿ ಬೇರೆ ವಾಹನಗಳು ಚಲಿಸಲು ಕಷ್ಟಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 


ಇದನ್ನೂ ಓದಿ- ಅಧಿಕಾರಿಗಳ ತಪ್ಪಿಗೆ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು? ಡಿಸಿಎಂ ಡಿಕೆ ಶಿವಕುಮಾರ್


ಕಳೆದೊಂದು ದಿನದಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಕೇರಳದ ಮುತ್ತಂಗ, ಸುಲ್ತಾನ್ ಬತ್ತೇರಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ವೀಕೆಂಡ್ (Weeken) ಗೆ ಕೇರಳಕ್ಕೆ  ಹೋಗುವ ಪ್ಲಾನ್ ಇದ್ದವರಿಗೆ ಮಳೆರಾಯ ಶಾಕ್ ನೀಡಿದ್ದು ಗುಂಡ್ಲುಪೇಟೆ ಕಡೆಯಿಂದ ಕೇರಳಕ್ಕೆ ಹೋಗುವವರು ಎರಡು ಬಾರಿ ಯೋಚನೆ ಮಾಡಬೇಕಿದೆ‌.


ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ನಿಂದ 5 ಕಿಮೀ ದೂರದಲ್ಲಿರುವ ಮುತ್ತಂಗವಿದ್ದು ಅಲ್ಲಿಂದ ತೆರಳಲು ತೀರಾ ಪ್ರಯಾಸ ಪಡಬೇಕಿದೆ. 


ಇದನ್ನೂ ಓದಿ- ಬ್ಯಾಂಕ್ʼಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸ್ಪಂದನೆ ಸಿಗದ ಆರೋಪ: ಅಧಿಕಾರಿಗಳಿಗೆ ಸಂಸದರ ವಾರ್ನಿಂಗ್


ಈ ಕುರಿತು ಮೂಲೆಹೊಳೆ  ಆರ್‌ಎಫ್‌ಓ ನರೇಶ್ ಪ್ರತಿಕ್ರಿಯಿಸಿ, ಕೇರಳ ಭಾಗದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ, ನಮ್ಮ  ಭಾಗದಲ್ಲಿ ತೊಂದರೆ ಇಲ್ಲಾ, ಮಳೆ ಹೆಚ್ಚಾದರೇ ಪೊಲೀಸ್ ಇಲಾಖೆ ವಾಹನಗಳಿಗೆ ನಿರ್ಬಂಧ ಹೇರಲಿದೆ ಎಂದು ತಿಳಿಸಿದರು.


ಕೇರಳದಲ್ಲಿ ಭಾರೀ ಮಳೆ (Heavy rain in Kerala): 
ಮುಂದಿನ ನಾಲ್ಕು ದಿನಗಳ ಕಾಲ ಕೇರಳದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಕೂಡ ಘೋಷಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.