ಹುಬ್ಬಳ್ಳಿ : ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಿಕೆ ಹಾಗೂ ವಿವಿಧ ಬೇಡಿಕೆ ಈಡೇರಿಸುವ ಉಗ್ರ ಸ್ವರೂಪದ ಹೋರಾಟದ‌ ನಿರ್ಧಾರ ತೆಗೆದುಕೊಳ್ಳಲಾಯಿತು. ನಗರದ ಖಾಸಗಿ ಹೊಟೇಲ್ ನಲ್ಲಿಂದು ನಡೆದ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜದ ಸಭೆಯಲ್ಲಿ ಒಮ್ಮತ ಅಭಿಪ್ರಾಯಕ್ಕೆ ಬರಲಾಯಿತು. ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ನ್ಯಾಯ ಸಿಗುವರೆಗೂ ಹೋರಾಟ, ಗಂಟಿಚೋರ್‌ ಸಮುದಾಯಕ್ಕೆ ತಮ್ಮ ಜಾತಿಯ ಬಗ್ಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದರು ಎಂದು ಆದೇಶ ಹೊರಡಿಸಿದ್ದರು. 


COMMERCIAL BREAK
SCROLL TO CONTINUE READING

ನಮಗೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ, ಜಿಲ್ಲಾಧಿಕಾರಿ ಆದೇಶ ಇದ್ದಾಗಲೂ ವಿಚಾರಣೆ ಹಾಗೂ ಸ್ಥಾನಿಕ ಚೌಕಾಶಿ ಮಾಡದೇ ನಮ್ಮ ಸಮುದಾಯದ ಜನರ ಜಾತಿ ಪತ್ರವನ್ನು ವಿನಃ ಕಾರಣ ತಿರಸ್ಕರಿಸುತ್ತಿದ್ದಾರೆ. ತಹಸೀಲ್ದಾರ ಸೇರಿದಂತೆ ಕೇಲ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಒತ್ತಡಕ್ಕಾಗಿ ನಮ್ಮ ಸಮಾಜದವರನ್ನು ಶಿಕ್ಷಣದಿಂದ ವಂಚಿತರಾಗಿಸಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. 


ಇದನ್ನೂ ಓದಿ: ನ್ಯೂಯಾರ್ಕ್ ಮ್ಯೂಸಿಕ್ ಕಾನ್ಸರ್ಟ್ ವೇಳೆ ನಿಕ್ ಜೊನಾಸ್ ಮೇಲೆ ಬ್ರಾ ಎಸೆತ..ನಟನ ಪ್ರತಿಕ್ರಿಯೆ ಹೀಗಿತ್ತು!


ಸಿಬ್ಬಂದಿಯತ್ತ ತೋರಿಸಿ ವಿನಾಕಾರಣ ವಿಳಂಭ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಸಮಾಜದ ಅನೇಕ ನ್ಯಾಯಯುತ ಬೇಡಿಕೆ ಈಡೇರಬೇಕು ಇನ್ನು ಸಮಾಜದ ಪುನರ್ ಸಂಘಟನೆ ಜೊತೆಗೆ ಸಮಾಜದಲ್ಲಿ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಜಾಗೃತಿ ಕುರಿತು ಚಿಂತನೆ ಮಾಡಲಾಯಿತು.


ಸಮಾಜದವರಿಂದ ನ್ಯಾಯ ಸಿಗುವವರೆಗೂ ಧರಣಿ ,ಹೋರಾಟ  ಮಾಡುವು ನಿರ್ಧಾರ ತೆಗೆದುಕೊಳ್ಳಲಾಯಿತು. ಯಾವುದೇ ಭಿನ್ನಾಭಿಪ್ರಾಯ ಹೊಂದದೆ ಒಂದಾಗಿ ಸಂಘಟಿತ ಹೋರಾಟ ನಡೆಸುವ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು. ಹಿಂದು ಗಂಟಿಚೋರ್  ಹುಬ್ಬಳ್ಳಿ ಘಟಕದ ಸಮಾಜದ ಅಧ್ಯಕ್ಷರಾದ ರಂಗನಾಥ ದೊಡ್ಡಮನಿ,  ಮುಖಂಡರಾದ ಚಂದ್ರಶೇಖರ ಹಲಕುರ್ಕಿ, ಮಲ್ಲೇಶ ಚಪ್ಪರಮನಿ, ಕಾಶಿನಾಥ ಅಂಕಲಿ, ಸುಧೀರ್ ಹೊಸೂರು, ಕರುಣಾ ಲೋಹಾರ್, ಭರತರಾಜ್ ಕಟ್ಟಿಮನಿ, ಶಿವಲಿಂಗ ಘಂಟಿ, ಅರ್ಜುನ ಕಟ್ಟಿಮನಿ, ಬಾಲರಾಜ್ ಹಲಕುರ್ಕಿ, ಅಶೋಕ ಕಟ್ಟಿಮನಿ ಸಮಾಜದ ಪ್ರಮುಖ ಮುಂತಾದವರಿದ್ದರು.


ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯ ಹ್ಯಾಟ್ರಿಕ್ ಗೆಲುವಿಗೆ ಬಿಜೆಪಿ ರಣತಂತ್ರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ