ವಿಜಯನಗರ : ಹೊಸಪೇಟೆಯಲ್ಲಿ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವದ  ರಥದ ಕಳಸ ಕಳಚಿದ ಹಿನ್ನಲೆಯಲ್ಲಿ ಭಕ್ತರಿಗೆ ಆತಂಕ ಎದುರಾಗಿದೆ.


COMMERCIAL BREAK
SCROLL TO CONTINUE READING

ಒಂದೆಡೆ ಕಳಸ ಕಳಚಿ ಕೆಳಗೆ ಬೀಳುತ್ತಿದ್ದುದ್ದನ್ನು ಗಮನಿಸಿದ ಯುವಕರು ಅದನ್ನು ಮತ್ತೆ ಜೋಡಿಸಿದ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಾಗಾದರೆ ಈಗ ಈ ಕಳಸ ಬಕಳಚಿ ಬೀಳೋದು ಅಪಶಕುನವಾ ಎನ್ನುವುದು ಭಕ್ತರಲ್ಲಿ ಒಂದು ರೀತಿ ಆತಂಕಕ್ಕೆ ಕಾರಣವಾಗಿದೆ.


ಇದನ್ನೂ ಓದಿ: 'ಒಬ್ಬರ ಮೀಸಲಾತಿಯನ್ನು ಕಿತ್ತು ಇನ್ನೊಬ್ಬರಿಗೆ ಕೊಡುವುದು ಬೇಡ'-ಸಿದ್ದರಾಮಯ್ಯ


ಕಳೆದೆರಡು ವರ್ಷಗಳಿಂದ ಕೊರೊನಾ ಇದ್ದ ಕಾರಣಕ್ಕೆ ರಥೋತ್ಸವ ನಡೆದಿರಲಿಲ್ಲ, ಜೊತೆಗೆ ಈ ಬಾರಿ ಹೊಸ ತೇರು ನಿರ್ಮಾಣ ಮಾಡಿ ಕಳಸ ಕೂಡಿಸಲಾಗಿತ್ತು, ಆದರೆ ಇಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವ ಕಳಚಿ ಬಿಡುವುದು ಎಲ್ಲರಲ್ಲಿಯೂ ಆಂತಕವನ್ನು ಸೃಷ್ಟಿಸಿತ್ತು.


ಇದನ್ನೂ ಓದಿ: "ಬಿಜೆಪಿ ಸರ್ಕಾರ ಸಣ್ಣ ಸಾಲ ತೋರಿಸಿ ದೊಡ್ಡ ಸಾಗರವನ್ನೇ ಕೊಳ್ಳೆ ಹೊಡೆದಿದೆ"


ವಿಜಯನಗರ ಜಿಲ್ಲೆಯ ಹೊಸಪೇಟೆ (Hosapete) ಯ ಟಿಬಿ ಡ್ಯಾಂ ಹತ್ತಿರದಲ್ಲೇ ಈ ಸಣ್ಣಕ್ಕಿ ವೀರಭದ್ರೇಶ್ವರ ದೇವಾಲಯ ಇದೆ.ರಥ ಎಳೆದ ಕೂಡಲೇ ಸುಮಾರು 50 ಮೀಟರ್ ವರೆಗೆ ದೂರ ಹೋಗಿ ಕಳಸ ಕೆಳಗೆ ಬಿದ್ದಿದೆ.ಕಳಸ ಕಟ್ಟುವವರ ನಿರ್ಲಕ್ಷ್ಯದಿಂದ ಈ ಅಚಾತುರ್ಯ ನಡೆದಿದೆ ಭಕ್ತರು ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥಶರ್ಮ ಮಾಹಿತಿ ನೀಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.